Advertisement
ದೆಹಲಿ, ಮಹಾರಾಷ್ಟ್ರ ಸೇರಿ ಎಲ್ಲೆಡೆ ಹಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಇದರ ಪರಿಣಾಮ ಆಂಧ್ರಪ್ರದೇಶ ಹೊರತುಪಡಿಸಿ ಉಳಿದ ಯಾವ ಕಡೆಯಿಂದಲೂ ಎಳನೀರಿಗೆ ಬೇಡಿಕೆ ಬರುತ್ತಿಲ್ಲ. ಜತೆಗೆ ಸ್ಥಳೀಯವಾಗಿ ಸುರಿಯುತ್ತಿರುವ ಮಳೆಯಿಂದಲೂ ಎಳನೀರನ್ನು ಕೊಯ್ಲು ಮಾಡು ವುದು ಅಸಾಧ್ಯವಾಗಿದೆ.
ಬೇಸಿಗೆಯಲ್ಲಿ ಏರಿದ್ದ ಬೆಲೆ: ಈ ವರ್ಷದ ಬೇಸಿಗೆಯಲ್ಲಿ ಎಳನೀರು ಉತ್ತಮ ಬೆಲೆಗೆ ಮಾರಾಟವಾಗಿದೆ. ಪ್ರತಿ ಎಳನೀರು ಬೆಲೆ ಮಾರ್ಚ್ ಹಾಗೂ ಏಪ್ರಿಲ್ನಲ್ಲಿ ಕನಿಷ್ಠ 25 ರೂ.ನಿಂದ ಗರಿಷ್ಠ 30 ರೂ.ವರೆಗೆ ತಲುಪಿತ್ತು. ಆಗ ವ್ಯಾಪಾರಸ್ಥರು ಎಳನೀರನ್ನು ಟೆಂಪೋಗಳಲ್ಲಿ ತುಂಬಿಕೊಂಡು ನಗರ, ಪಟ್ಟಣ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದರು. ಕೊಯ್ಲು ಮಾಡಲಾಗ್ತಿಲ್ಲ: ಮೇ 4 ರಿಂದ ಮುಂಗಾರು ಪೂರ್ವ ಮಳೆ ಸತತವಾಗಿ ಸುರಿದ ಹಿನ್ನೆಲೆಯಲ್ಲಿ ತೆಂಗಿನ ತೋಟಗಳಲ್ಲೆಲ್ಲ ನೀರು ಆವರಿಸಿದೆ. ಆಗಾಗ ಬೀಳುವ ಸೋನೆ ಮಳೆಯೂ ಮರ ಹತ್ತುವುದಕ್ಕೆ, ಎಳನೀರು ಇಳಿಸುವುದಕ್ಕೆ ಅಡ್ಡಿ ಉಂಟುಮಾಡಿದೆ. ಇದರ ಪರಿಣಾಮ ಮದ್ದೂರಿನ ಎಳನೀರು ಮಾರುಕ ಟ್ಟೆಗೆ ಜನವರಿಯಿಂದ ಪ್ರತಿ ತಿಂಗಳೂ ಬರುತ್ತಿದ್ದ ಎಳನೀರು ಪ್ರಮಾಣ ಏಪ್ರಿಲ್ವರೆಗೆ ಏರುಗತಿಯಲ್ಲಿ ಸಾಗಿತ್ತು. ಮೇನಲ್ಲಿ ಕೊಂಚ ಇಳಿಮುಖ ಕಂಡಿತು.ಜನವರಿಯಲ್ಲಿ 95.30 ಲಕ್ಷ, ಫೆಬ್ರವರಿಯಲ್ಲಿ 99.82 ಲಕ್ಷ, ಮಾರ್ಚ್ನಲ್ಲಿ 1.17 ಕೋಟಿ, ಏಪ್ರಿಲ್ ನಲ್ಲಿ 1.36 ಕೋಟಿ ಉತ್ಪಾದನೆಯಾಗಿದ್ದ ಎಳನೀರು ಮೇ ತಿಂಗಳಲ್ಲಿ 1.18 ಲಕ್ಷಕ್ಕೆ ಇಳಿಕೆಯಾಯಿತು.
Related Articles
Advertisement
ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಅಲ್ಲಿಗೆ ಪೂರೈಕೆಯನ್ನೇ ಸ್ಥಗಿತಗೊಳಿಸಲಾಗಿದೆ. ಪ್ರತಿ ಎಳನೀರಿಗೆ 25 ರಿಂದ 30 ರೂ. ಇದ್ದ ಬೆಲೆ ಈಗ 12 ರೂ.ನಿಂದ 20 ರೂ.ಗೆ ಇಳಿದಿದೆ.
ನಿರಂತರ ಮಳೆಯಿಂದಾಗಿ ಮರದಿಂದ ಎಳನೀರು ಇಳಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಎಳನೀರಿಗೆ ಬೇಡಿಕೆಯೂ ಇಲ್ಲ, ಬೆಲೆಯೂ ಇಲ್ಲ.ಪ್ರತಿ ಎಳನೀರು 12 ರೂ.ನಿಂದ 20 ರೂ.ವರೆಗಷ್ಟೇ ಮಾರಾಟವಾಗುತ್ತಿದೆ. ಹೊರಗಡೆಯಿಂದಲೂ ಎಳನೀರಿಗೆ ಬೇಡಿಕೆ ಬರುತ್ತಿಲ್ಲ.
– ಮಲ್ಲರಾಜು, ಎಳನೀರು ವರ್ತಕ,
ತೈಲೂರು, ಮದ್ದೂರು ತಾ. ಮದ್ದೂರಿನ ಎಳನೀರು ಮಾರುಕಟ್ಟೆ ನಷ್ಟದಲ್ಲೇನೂಇಲ್ಲ. ಮಾರುಕಟ್ಟೆಗೂ ನಿರೀಕ್ಷೆಗೂ ಮೀರಿದ ಎಳನೀರು ಏಪ್ರಿಲ್ನಲ್ಲಿ ಬಂದಿತ್ತು. ಮೇನಲ್ಲಿ ಸ್ವಲ್ಪ ಇಳಿಮುಖವಾಗಿದೆ. ಮಳೆ ಹೆಚ್ಚಾಗಿರುವುದು ಇದಕ್ಕೆ ಕಾರಣ. ಜುಲೈ ತಿಂಗಳಿನಿಂದ ಎಳನೀರು ಹೆಚ್ಚು ಮಾರುಕಟ್ಟೆಗೆ ಬರಲಿದೆ. ಬೇಡಿಕೆಯೂ ಹೆಚ್ಚಾಗುವ ನಿರೀಕ್ಷೆ ಇದೆ.
– ಶ್ರೀಕಂಠಪ್ರಭು, ಕಾರ್ಯದರ್ಶಿ,
ಎಳನೀರು ಮಾರುಕಟ್ಟೆ, ಮದ್ದೂರು – ಮಂಡ್ಯಮಂಜುನಾಧ್