Advertisement

KGF;ನಿನ್ನೆ ತಡೆ ಕೋರಿ, ಇವತ್ತು ಯಾಕೆ ಅರ್ಜಿ ವಾಪಸ್ ಪಡೆಯುತ್ತಿದ್ದೀರಿ

04:41 PM Dec 21, 2018 | Sharanya Alva |

ಬೆಂಗಳೂರು:ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿರುವ ಕೆಜಿಎಫ್ ಸಿನಿಮಾ ಶುಕ್ರವಾರ ದೇಶಾದ್ಯಂತ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಏತನ್ಮಧ್ಯೆ ಕೆಜಿಎಫ್ ಚಿತ್ರ ಬಿಡುಗಡೆ ಮಾಡದಂತೆ ತಡೆಯಾಜ್ಞೆ ಕೋರಿ ನಗರದ 10ನೇ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ದೂರುದಾರ ವೆಂಕಟೇಶ್ ಶುಕ್ರವಾರ ವಾಪಸ್ ಪಡೆದಿದ್ದಾರೆ.

Advertisement

ಕೆಜಿಎಫ್ ಸಿನಿಮಾ ಕೋಲಾರದ ಕುಖ್ಯಾತ ರೌಡಿ ತಂಗಂ ಜೀವನ್ನಾಧರಿಸಿದ್ದು, ಇದು ತನ್ನ ಕಥೆ ಎಂಬುದಾಗಿ ಆರೋಪಿಸಿ  ಕೆಜಿಎಫ್ ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡುವಂತೆ ಕೋರಿ ವೆಂಕಟೇಶ್ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ 10ನೇ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಂ.ಪಂಚಾಕ್ಷರಿ ಅವರು ಮಧ್ಯಂತರ ತಡೆ ನೀಡಿ, ಜನವರಿ 7ಕ್ಕೆ ವಿಚಾರಣೆ ಮುಂದೂಡಿದ್ದರು.

ನಿನ್ನೆ ಅರ್ಜಿ ಸಲ್ಲಿಸಿ, ಇಂದು ಯಾಕೆ ವಾಪಸ್ ಪಡೆಯುತ್ತಿದ್ದೀರಿ?

ಕೆಜಿಎಫ್ ಸಿನಿಮಾ ಪ್ರದರ್ಶನಕ್ಕೆ ತಡೆ ನೀಡಿರುವ ಅರ್ಜಿಯನ್ನು ವಾಪಸ್ ಪಡೆಯುತ್ತಿರುವುದಾಗಿ ದೂರುದಾರ ವೆಂಕಟೇಶ್ ಅವರ ಪರ ವಕೀಲರು ನ್ಯಾಯಾಧೀಶರಲ್ಲಿ ಶುಕ್ರವಾರ 10ನೇ ಸೆಷನ್ಸ್ ಕೋರ್ಟ್ ನಲ್ಲಿ ಮನವಿ ಮಾಡಿಕೊಂಡಾಗ, ನಿನ್ನೆ ತಡೆಯಾಜ್ಞೆ ಕೋರಿ ಇವತ್ತು ಯಾಕೆ ವಾಪಸ್ ಪಡೆಯುತ್ತಿದ್ದೀರಿ? ಚಿತ್ರ ತಂಡದ ಜೊತೆ ಮಾತನಾಡಿದ್ದೀರಾ ಎಂದು ಪ್ರಶ್ನಿಸಿದ್ದರು. ಅದಕ್ಕೆ ಅವರು ಹೌದು ಮಾತುಕತೆ ನಡೆಸಿದ್ದೇನೆ, ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದಾಗ..ನ್ಯಾಯಾಧೀಶರು ಸಮ್ಮತಿ ಸೂಚಿಸಿರುವುದಾಗಿ ವರದಿ ತಿಳಿಸಿದೆ.

Advertisement

ಏತನ್ಮಧ್ಯೆ ಯಶ್ ಅಭಿನಯದ ಕೆಜಿಎಫ್ ಸಿನಿಮಾವನ್ನು ಶುಕ್ರವಾರ ಬೆಳ್ಳಂಬೆಳಗ್ಗೆ ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ವೀಕ್ಷಿಸಿದ್ದ ಯಶ್ ಅಭಿಮಾನಿಗಳು, ದೂರುದಾರ ವೆಂಕಟೇಶ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಕೆಜಿಎಫ್ ಸಿನಿಮಾಕ್ಕೂ ಕೋಲಾರದ ರೌಡಿ ತಂಗಂ ಕಥೆಗೂ ಯಾವುದೇ ಸಂಬಂಧವಿಲ್ಲ. ಅನಾವಶ್ಯಕ ಗೊಂದಲ ಹುಟ್ಟಿಸುತ್ತಿರುವುದೇಕೆ? ಬೇಕಿದ್ದರೆ ಸಿನಿಮಾ ನೋಡಲಿ, ಗೊತ್ತಾಗುತ್ತೆ ಎಂದು ತಿರುಗೇಟು ನೀಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next