Advertisement

ಪ.ಜಾ.ಪ್ರಮಾಣ ಪತ್ರಕ್ಕೆ ಅರ್ಹರು: ಪ್ರಿಯಾಂಕ್‌

06:00 AM Dec 21, 2018 | |

ಸುವರ್ಣಸೌಧ(ವಿಧಾನಸಭೆ): ಭೋವಿ ಮತ್ತು ಅದರ ಸಮಾನಾಂತರ ಜಾತಿಯವರು ರಾಜ್ಯದ ಯಾವುದೇ ಜಿಲ್ಲೆಯಲ್ಲಿ ವಾಸಿಸುತ್ತಿದ್ದರೂ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯಲು ಅರ್ಹರಾಗಿರುತ್ತಾರೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.

Advertisement

ಬೈಂದೂರು ಶಾಸಕ ಬಿಜೆಪಿಯ ಬಿ.ಎಂ.ಸುಕುಮಾರ ಶೆಟ್ಟಿಯವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ಸಂವಿಧಾನ (ಪರಿಶಿಷ್ಟ ಜಾತಿ) ಆದೇಶ (ತಿದ್ದುಪಡಿ) 2015ರಲ್ಲಿ ತಿದ್ದುಪಡಿ ಮೂಲಕ ಭೋವಿ, ಓಡ್‌, ವಡ್ಡಾರ್‌, ಓಡ್ಡಾರ್‌, ಒಡ್ಡೆ, ಬೋ ಮೊದಲಾದ ಸಮಾನಾಂತರ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲಾಗಿದೆ. ಈ ಜಾತಿಯವರು ರಾಜ್ಯದ ಯಾವುದೇ ಭಾಗದಲ್ಲಿ ವಾಸವಾಗಿದ್ದರೂ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯ ಬಹುದಾಗಿದೆ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next