Advertisement

ಈದ್ ಮಿಲಾದ್ ಮೆರವಣಿಗೆಯಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ; ದೂರು ದಾಖಲು

10:25 PM Oct 10, 2022 | Team Udayavani |

ಗಂಗಾವತಿ :ಈದ್ ಮಿಲಾದ್ ಸಂದರ್ಭದ ಮೆರವಣಿಗೆಯಲ್ಲಿ ರಾಷ್ಟ್ರಧ್ವಜವನ್ನು ಹೋಲುವ ಬಾವುಟಕ್ಕೆ ಅಪಮಾನ ಮಾಡಿದಕ್ಕೆ ಸಂಬಂಧಿಸಿದಂತೆ ನಗರ ಠಾಣೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

Advertisement

ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಕೆಲ ಯುವಕರು ಕೇಸರಿ ಬಿಳಿ ಹಸಿರು ಹಾಗೂ ಮಧ್ಯೆ ಅಶೋಕ ಚಕ್ರದ ಬದಲು ಚಂದ್ರ ಹಾಗೂ ನಕ್ಷತ್ರ ಇರುವ ಧ್ವಜವನ್ನು ಹಿಡಿದು ಆಕಡೆ ಈಕಡೆ ಬೀಸುತ್ತಾ ತೆರಳುತ್ತಿದ್ದರು .

ಈ ಸಂದರ್ಭದಲ್ಲಿ ಮೆರವಣಿಗೆ ಬಂದೋಬಸ್ತನಲ್ಲಿದ್ದ ನಗರ ಠಾಣೆಯ ಪಿಐ ಟಿ.ವೆಂಕಟಸ್ವಾಮಿ ಹಾಗೂ ಪೊಲೀಸರು ರಾಷ್ಟ್ರಧ್ವಜದ ಹಾಗೆ ಇರುವ ಕೇಸರಿ ಬಿಳಿ ಹಸಿರು ಹಾಗೂ ಚಂದ್ರ- ನಕ್ಷತ್ರವಿರುವ ಬಾವುಟವನ್ನು ಹಿಡಿದ ಯುವಕರನ್ನು ಹಿಡಿದುಕೊಳ್ಳಲು ಯತ್ನುಸಿದರೂ ಓಡಿಹೋದರು. ನಗರದ ಮಹಾವೀರ ವೃತ್ತದ ಬಳಿ ಜರುಗಿದ್ದು ಪೊಲೀಸರು ಸ್ವಯಂಪ್ರೇರಿತವಾಗಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಕುರಿತು ಕೇಸ್ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next