Advertisement

ಅವಹೇಳನಕಾರಿ ಪೋಸ್ಟ್‌; ಕಠಿಣ ಕ್ರಮಕ್ಕೆ ಒತ್ತಾಯ

03:45 PM Mar 04, 2020 | Suhan S |

ರಾಣಿಬೆನ್ನೂರ: ಮೊಹಮ್ಮದ್‌ ಪೈಗಂಬರ್‌ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದ ಯುವಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸ್ಥಳೀಯ ಅಲ್ಪಸಂಖ್ಯಾತರ ಹಿತರಕ್ಷಣಾ ವೇದಿಕೆ ಹಾಗೂ ಮುಸ್ಲಿಂ ಸಮಾಜದ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿ ಉಪತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Advertisement

ಪ್ರತಿಭಟನೆ ನೇತೃತ್ವ ವಹಿಸಿದ್ದ ಅಲ್ಪಸಂಖ್ಯಾತರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎಸ್‌.ಎಂ.ಪಾಟೀಲ ಮಾತನಾಡಿ, ಮುಸ್ಲಿಂ ಸಮಾಜದ ಆರಾಧ್ಯದೈವ ಮೊಹಮ್ಮದ್‌ ಪೈಗಂಬರ ಅವರ ಬಗ್ಗೆ ಅವಮಾನಕರ ರೀತಿಯಲ್ಲಿ ಮಾತನಾಡಿರುವುದು ಶೋಭೆಯಲ್ಲ. ಅಂತಹವರ ಮೇಲೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು. ಅಲ್ಲದೆ ಅವರನ್ನು ಗಡಿಪಾರು ಮಾಡಬೇಕು. ಕೂಡಲೇ ಆತನನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ಸಮಾಜದಲ್ಲಿ ಸೌಹಾರ್ದತೆ ಕೆಡಿಸುವ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸುವುದು ಅಗತ್ಯವಿದೆ. ಯಾವುದೇ ಕಾರಣಕ್ಕೂ ಆ ವ್ಯಕ್ತಿಯನ್ನು ಸರ್ಕಾರ ಕ್ಷಮಿಸಬಾರದು ಎಂದು ಪಾಟೀಲ ಆಗ್ರಹಿಸಿದರು.

ಜೈರುದ್ದೀನ್‌ ಬಾವಿಕಟ್ಟಿ, ಎಂ.ಕೆ. ಗುತ್ತಲ, ಎ.ಪಿ.ಟಿ.ಅತ್ತಾರ, ನಜೀರಸಾಬ್‌ ದಾರೂಗಾರ, ಖಾದರಸಾಬ್‌ ನಾಶಿಪುಡಿ, ವಕೀಲ ಕಲ್ಮನಿ, ಚಂದ್ರಪ್ಪ ಕಡೂರ, ಅಜೀಜಸಾಬ್‌ ನಾಶಿಪುಡಿ, ಆಶಾಬಿ ಲೋಹಾರ, ಮಹಬೂಬ್‌ ಪಾಟೀಲ, ನಜೀರ್‌ ಪಾಟೀಲ, ಅಜಿದಾದ್‌ ನಾಶಿಪುಡಿ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next