Advertisement

ಉಪ ಮುಖ್ಯಮಂತ್ರಿ ಆದ್ರೂ ಅಧಿಕಾರವಿಲ್ಲ

02:44 PM Jul 08, 2018 | Team Udayavani |

ಬೆಂಗಳೂರು: “ಯಾರು ಮಾಡಿರುವ ಪುಣ್ಯವೋ ಉಪ ಮುಖ್ಯಮಂತ್ರಿಯಾಗಿದ್ದೇನೆ. ಆದರೆ, ನನ್ನ ಪರಿಸ್ಥಿತಿ ದಲಿತ ನೌಕರರಿಗಿಂತ ಭಿನ್ನವಾಗಿಲ್ಲ. ನನಗೆ  ಯಾವುದೇ ಅಧಿಕಾರ ಇಲ್ಲ’ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ತಮ್ಮದೇ ಸಮುದಾಯದ ಸಭೆಯೊಂದರಲ್ಲಿ ಹೇಳಿಕೊಂಡಿದ್ದಾರೆ  ಎನ್ನಲಾಗಿದೆ. 

Advertisement

ಇತ್ತೀಚೆಗೆ ನಡೆದ ಎಸ್ಸಿ, ಎಸ್ಟಿ ಶಾಸಕರು ಮತ್ತು ಸಂಸದರ ಸನ್ಮಾನ ಸಮಾರಂಭದಲ್ಲಿ ಡಾ.ಜಿ.ಪರಮೇಶ್ವರ್‌  ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. “ದಲಿತರು ಅಂಬೇಡ್ಕರ್‌ ಅವರನ್ನು ತಡವಾಗಿ ನೆನಪಿಸಿಕೊಂಡಿದ್ದೀರಿ. ದಲಿತರು ಮೊದಲೇ ಒಗ್ಗಟ್ಟಾಗಿದ್ದರೆ ನಮ್ಮನ್ನು ಯಾರೂ ಮುಟ್ಟುತ್ತಿರಲಿಲ್ಲ.

ದಲಿತ ಮುಖ್ಯಮಂತ್ರಿ ಎಂದು ಕರೆಯುತ್ತಾ  ರೆಯೇ ಹೊರತು ನಮ್ಮನ್ನು ಮುಖ್ಯಮಂತ್ರಿ ಎಂದು ಒಪ್ಪಿಕೊಳ್ಳುವುದಿಲ್ಲ.  ಬಸವಲಿಂಗಯ್ಯ, ಕೆ.ಎಚ್‌. ರಂಗನಾಥ ಅವರಿಗೆ ಮುಖ್ಯಮಂತ್ರಿ ಆಗುವ ಅರ್ಹತೆ ಇತ್ತು. ಆದರೆ, ಅವಕಾಶ ಸಿಗಲಿಲ್ಲ. ಮಲ್ಲಿಕಾರ್ಜುನ  ಖರ್ಗೆ ನಾನು ಕಂಡ ಅಪ್ರತಿಮ ನಾಯಕ. ಅಂತಹ ಧೀಮಂತ ನಾಯಕ ಡಿಸಿಎಂ ಕೂಡ ಆಗಲಿಲ್ಲ,’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.  

“ಎಸ್ಸಿ, ಎಸ್ಟಿ ಸರ್ಕಾರಿ ನೌಕರರ ಬಡ್ತಿ ಮೀಸಲಾತಿ ವಿಷಯದಲ್ಲಿ ನ್ಯಾಯಾಲಯ ಮಧ್ಯೆ ಪ್ರವೇಶಿಸುವಂತಿಲ್ಲ ಎಂದು ಕಾನೂನಿನಲ್ಲಿ  ಸ್ಪಷ್ಟವಾಗಿ ಹೇಳಲಾಗಿದೆ. ಯಾವುದೇ ಕಾರಣಕ್ಕೂ ದಲಿತ ಅಧಿಕಾ ರಿಗಳಿಗೆ ಹಿಂಬಡ್ತಿ ಆಗಲು ನಾನು ಬಿಡು ವುದಿಲ್ಲ,’ ಎಂದು ಇದೇ ಸಭೆಯಲ್ಲಿ ಪರಮೇಶ್ವರ್‌  ಭರವಸೆ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next