Advertisement

ಬಿತ್ತನೆ ಬೀಜ ಖರೀದಿಯಲ್ಲಿ ನಿರುತ್ಸಾಹ

10:37 AM May 21, 2019 | Suhan S |

ಹುಳಿಯಾರು: ಹೋಬಳಿಯಲ್ಲಿ ಮುಂಗಾರು ಪೂರ್ವ ವರ್ಷಧಾರೆ ಕೈ ಕೊಟ್ಟಿದೆ. ಪರಿಣಾಮ ಕಳೆದ ವರ್ಷ ಮೇ ಮಾಹೆಯಲ್ಲಾಗಲೇ ಬಿತ್ತನೆ ಕಾರ್ಯ ಮುಗಿಸಿದ್ದ ರೈತ ಈ ವರ್ಷ ಉಳಿಮೆ ಸಹ ಮಾಡದೆ ಮಳೆ ಎದುರು ನೋಡುತ್ತಿದ್ದಾನೆ. ಆದರೂ, ಮಳೆ ಬರುವುದೋ ಇಲ್ಲವೋ ಎಂಬ ಅನುಮಾನ ಸಹ ರೈತ ವಲಯದಲ್ಲಿ ಮೂಡಿದ್ದು ಬಿತ್ತನೆ ಬೀಜ ಖರೀದಿಯಲ್ಲಿ ನಿರುತ್ಸಾಹ ತೋರುತ್ತಿದ್ದಾರೆ.

Advertisement

ಮಳೆ ಬಂದ ತಕ್ಷಣ ಬಿತ್ತನೆ ಮಾಡುವ ಉದ್ದೇಶದಿಂದ ರೈತರು ಬಿತ್ತನೆ ಬೀಜಗಳನ್ನು ಸಂಗ್ರಹಿಸಿಕೊಟ್ಟುಕೊಳ್ಳುತ್ತಾರೆ. ಹಾಗಾಗಿ ಹುಳಿ ಯಾರು ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳನ್ನು ವಿತರಿಸಲು ಆರಂಭಿಸಿದೆ.

ಅಲ ಸಂದೆ, ಹೆಸರು, ಉದ್ದು, ಜೋಳ, ಮುಸುಕಿನ ಜೋಳ, ಸೂರ್ಯಕಾಂತಿ ಬೀಜ ಗಳನ್ನು ವಿತರಿಸಲಾಗುತ್ತಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಿತ್ತನೆ ಬೀಜ ಖರೀದಿಯೇ ಇಲ್ಲದಾಗಿದೆ. ಕಳೆದ ವರ್ಷ ಮೇ ಮಾಹೆ ಯಲ್ಲಾಗಲೇ 3,286 ಕೆ.ಜಿ. ಹೆಸರು, 545 ಕೆ.ಜಿ.ತೊಗರಿ, 205 ಕೆ.ಜಿ.ಉದ್ದು ಖರೀದಿಸಿದ್ದರು.

ಆದರೆ ಈ ವರ್ಷ ಕೇವಲ 300 ಕೆ.ಜಿ. ಹೆಸರು ಹಾಗೂ 60 ಕೆ.ಜಿ ಉದ್ದು ಮಾರಾಟ ವಾಗಿದ್ದು, ಇನ್ನೂ 2250 ಕೆ.ಜಿ. ಹೆಸರು, 200 ಕೆ.ಜಿ. ಉದ್ದು, 540 ಕೆ.ಜಿ.ತೊಗರಿ, 450 ಕೆ.ಜಿ. ಅಲಸಂದೆ ದಾಸ್ತಾನಿದೆ ಎಂದು ಸಹಾಯಕ ಕೃಷಿ ಅಧಿಕಾರಿ ತಿಪ್ಪೇಸ್ವಾಮಿ ಮಾಹಿತಿ ನೀಡಿದರು.

ಬೀಜ ಖರೀದಿಗೆ ರೈತ ಹಿಂದೇಟು ಹಾಕುತ್ತಿ ರುವುದಕ್ಕೆ ಮಳೆ ಬಾರದಿರುವುದು ಪ್ರಮುಖ ಕಾರಣವಾಗಿದೆ. ಸಾಮಾನ್ಯವಾಗಿ ಮಾರ್ಚ್‌ ಮತ್ತು ಏಪ್ರಿಲ್ ತಿಂಗಳಲ್ಲಿ ಬೀಳುವ ಪೂರ್ವ ಮುಂಗಾರು ಮಳೆ ಸಹ ಒಂದೇ ಒಂದು ಹನಿ ಈ ಭಾಗದಲ್ಲಿ ಬಿದ್ದಿಲ್ಲ. ಕಳೆದ ವರ್ಷ ತಾಲೂಕಿ ನಲ್ಲಿ ಏಪ್ರಿಲ್ನಲ್ಲಿ 34 ಮಿಮೀ, ಮೇನಲ್ಲಿ 140 ಮಿಮೀ ಮಳೆ ಬಿದ್ದಿತ್ತು.

Advertisement

ಆದರೆ ಈ ವರ್ಷ ಏಪ್ರಿಲ್ನಲ್ಲಿ 14 ಮಿಮೀ, ಮೇನಲ್ಲಿ 21 ಮಿಮೀ ಮಳೆ ಬಿದಿದ್ದು ಹುಳಿಯಾರು ಹೋಬಳಿ ಯಲ್ಲಂತೂ ಒಂದು ದಿನ ಸಾಮಾನ್ಯ ಮಳೆ ಬಿಟ್ಟರೆ ಇಲ್ಲಿಯವರೆವಿಗೆ ಮಳೆಯೇ ಆಗಿಲ್ಲ.

ಹಾಗಾಗಿ ಈ ಭಾಗದಲ್ಲಿ ಕೃಷಿ ಚಟುವಟಿಕೆ ಸ್ಥಗಿತಗೊಂಡಿದ್ದು ಕಳೆದ ಮೂರ್ನಲ್ಕು ದಿನಗಳ ಹಿಂದೆ ಬಿದ್ದ ಅಲ್ಪ ಮಳೆಯಿಂದ ಮುಂದೆ ಮಳೆ ಆಗಬಹುದು ಎಂಬ ನಿರೀಕ್ಷೆಯಲ್ಲಿ ಕೆಲ ರೈತರು ಉಳುಮೆ ಮಾಡಿ ಮಣ್ಣನ್ನು ಹದ ಮಾಡಿ ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದಾರೆ.

ಉಳಿದಂತೆ ಅಡಿಕೆ ಮತ್ತು ತೆಂಗು ಬೆಳೆಗಾರರು ತೋಟ ಉಳಿಸಿಕೊಳ್ಳಲು ಟ್ಯಾಂಕರ್‌ನಲ್ಲಿ ನೀರು ಹೊಡೆ ಸುತ್ತಿದ್ದಾರೆ. ಬಹುತೇಕ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ.

● ಎಚ್.ಬಿ.ಕಿರಣ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next