Advertisement

ಲಾಲು ಪ್ರಸಾದ್‌ ಯಾದವ್‌ಗೆ ಜಾಮೀನು ಮಂಜೂರು ಮಾಡಿದ ಜಾರ್ಖಂಡ್‌ ಹೈಕೋರ್ಟ್‌

10:17 AM Jul 13, 2019 | Sathish malya |

ರಾಂಚಿ : ದೇವಗಢ ಟ್ರೆಶರಿಗೆ ಸಂಬಂಧಿಸಿದ ಬಹುಕೋಟಿ ಮೇವು ಹಗರಣದಲ್ಲಿ ಜಾರ್ಖಂಡ್‌ ಹೈಕೋರ್ಟ್‌ ಇಂದು ಶುಕ್ರವಾರ ಆರ್‌ಜೆಡಿ ನಾಯಕ ಮತ್ತು ಮಾಜಿ ಬಿಹಾರ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ಗೆ ಜಾಮೀನು ಮಂಜೂರು ಮಾಡಿತು.

Advertisement

ಲಾಲು ಅವರು ಈ ಮೊದಲು ಸಲ್ಲಿಸಿದ್ದ ಹಲವಾರು ಜಾಮೀನು ಕೋರಿಕೆ ಅರ್ಜಿ  ತಿರಸ್ಕೃತವಾಗಿದ್ದವು. ಸುಪ್ರೀಂ ಕೋರ್ಟ್‌ ಕೂಡ ಈ ವರ್ಷ ಎಪ್ರಿಲ್‌ ನಲ್ಲಿ ಲಾಲು ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

ಕಳೆದ ಜೂನ್‌ 13ರಂದು ಲಾಲು ಅವರು ಜಾರ್ಖಂಡ್‌ ಹೈಕೋರ್ಟಿಗೆ ಜಾಮೀನು ಕೋರಿಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಧೀಶ ಅಪರೇಶ್‌ ಸಿಂಗ್‌ ಅವರು ಜುಲೈ 12ರಂದು ಕೋರ್ಟಿಗೆ ಹಾಜರಾಗುವಂತೆ ಲಾಲು ಗೆ ಸೂಚಿಸಿದ್ದರು.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next