Advertisement
ರೋಹಿತ್ ಶರ್ಮ ನಾಯಕತ್ವದ “ಇಂಡಿಯಾ ಬ್ಲೂ’ ತಂಡ ವಿಜಯ್ ಹಜಾರೆ ಟ್ರೋಫಿ ಚಾಂಪಿಯನ್ ತಮಿಳುನಾಡು ಮತ್ತು “ಇಂಡಿಯಾ ರೆಡ್’ ತಂಡವನ್ನು ಎದುರಿಸಲಿದೆ. “ಇಂಡಿಯಾ ರೆಡ್’ ತಂಡವನ್ನು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಪಾರ್ಥಿವ್ ಪಟೇಲ್ ಮುನ್ನಡೆಸಲಿದ್ದಾರೆ. ಪಾರ್ಥಿವ್ ಸಾರಥ್ಯದಲ್ಲೇ ಈ ವರ್ಷ ಗುಜರಾತ್ ರಣಜಿ ಚಾಂಪಿಯನ್ ಆಗಿ ಮೂಡಿಬಂದಿತ್ತು.
ರೋಹಿತ್ ಶರ್ಮ ಪಾಲಿಗೆ ದೇವಧರ್ ಟ್ರೋಫಿ ಟೂರ್ನಮೆಂಟ್ ಮುಂಬರುವ ಐಪಿಎಲ್ಗೆ ಉತ್ತಮ ವೇದಿಕೆಯಾಗಬೇಕಿದೆ. ಕರ್ನಾಟಕದ ಮನೀಷ್ ಪಾಂಡೆ, ಮಾಯಾಂಕ್ ಅಗರ್ವಾಲ್, ಪ್ರಸಿದ್ಧ್ ಕೃಷ್ಣ, ಟೀಮ್ ಇಂಡಿಯಾದಿಂದ ದೂರಾಗಿರುವ ಶಿಖರ್ ಧವನ್ ಮೊದಲಾದವರು ಈ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ.
Related Articles
Advertisement
ಇಂಡಿಯಾ ರೆಡ್ ತಂಡ: ಪಾರ್ಥಿವ್ ಪಟೇಲ್ (ನಾಯಕ), ಶಿಖರ್ ಧವನ್, ಮನೀಷ್ ಪಾಂಡೆ, ಮಾಯಾಂಕ್ ಅಗರ್ವಾಲ್, ಕೇದಾರ್ ಜಾಧವ್, ಇಶಾಂಕ್ ಜಗ್ಗಿ, ಗುರುಕೀರತ್ ಮಾನ್, ಅಕ್ಷರ್ ಪಟೇಲ್, ಅಕ್ಷಯ್ ಕರ್ಣೆವಾರ್, ಅಶೋಕ್ ದಿಂಡ, ಕುಲವಂತ್ ಖೆಜೊಲಿಯ, ಧವಳ್ ಕುಲಕರ್ಣಿ, ಗೋವಿಂದ ಪೋದ್ದರ್.