Advertisement

ಕಾಲೇಜು ಶಿಕ್ಷಣಕ್ಕೆ ಅವಕಾಶ ನಿರಾಕರಣೆ : ಹುಡುಗಿ ಆತ್ಮಹತ್ಯೆ ಯತ್ನ

03:36 PM Apr 22, 2017 | udayavani editorial |

ಮುಜಫ‌ರನಗರ : ಹೆತ್ತವರು ತನಗೆ ಕಾಲೇಜು ಶಿಕ್ಷಣಕ್ಕೆ ಅವಕಾಶ ಕಲ್ಪಿಸದ ಕಾರಣಕ್ಕೆ ಮನನೊಂದು 12ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಕಾಲವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ. 

Advertisement

ತನ್ನ ಕುಟುಂಬದವರು ತನ್ನ ಕಾಲೇಜು ಶಿಕ್ಷಣಕ್ಕೆ ಅವಕಾಶ ನೀಡದಿರುವ ನಿರ್ಧಾರದಿಂದ ಹತಾಶಳಾದ 18 ವರ್ಷ ಪ್ರಾಯದ ಹುಡುಗಿಯು ಗಂಗಾ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದಳು. ಸುದ್ದಿ ತಿಳಿದ ಪೊಲೀಸರು ಕೂಡಲೇ ಕಾರ್ಯಾಚರಿಸಿ ಕಾಲುವೆಗೆ ಹಾರಿದ ಹುಡುಗಿಯನ್ನು ಮೇಲಕ್ಕೆತ್ತಿ ಪಾರುಗೊಳಿಸಿದರು. ಬಳಿಕ ಆಕೆಯನ್ನು ಆಕೆಯ ಹೆತ್ತವರಿಗೆ ಒಪ್ಪಿಸಿದರು. 

ಇನ್ನೊಂದು ಪ್ರಕರಣದಲ್ಲಿ 40 ವರ್ಷ ಪ್ರಾಯದ ಸುಭಾಷ್‌ ಎಂಬವರ ಛಿದ್ರಗೊಂಡ ಶವವು ರೈಲು ಹಳಿಯಲ್ಲಿ ಬಿದ್ದಿದ್ದುನ್ನು ಪೊಲೀಸರು ಪತ್ತೆ ಹಚ್ಚಿದರು. ಈತನ ನಿನ್ನೆ ರಾತ್ರಿ ಸಿಂಧ್‌ವಾಲಿ ರೈಲ್ವೇ ಕ್ರಾಸಿಂಗ್‌ನಲ್ಲಿ ಧಾವಿಸಿ ಬರುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. 

ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವ್ಯಕ್ತಿಯ ಆತ್ಮಹತ್ಯೆಯ ಹಿಂದಿನ ಕಾರಣವೇನೆಂದು ತಿಳಿದುಬಂದಿಲ್ಲ. ಪೊಲೀಸ್‌ ತನಿಖೆ ನಡೆದಿದೆ. 

Advertisement

Udayavani is now on Telegram. Click here to join our channel and stay updated with the latest news.

Next