Advertisement

ತೊಗರಿ ಖರೀದಿ ಕೇಂದ್ರಕ್ಕೆ ಆಗ್ರಹ

01:18 PM Jan 21, 2020 | Suhan S |

ದೇವರಹಿಪ್ಪರಗಿ: ಯಲಗೋಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ತೊಗರಿ ಖರೀದಿ ಕೇಂದ್ರ ಮಂಜೂರು ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ತಹಶೀಲ್ದಾರ್‌ ವೈ.ಬಿ. ನಾಗಠಾಣ ಅವರಿಗೆ ಮನವಿ ಸಲ್ಲಿಸಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿಗೆ ಆಗಮಿಸಿದ ಗ್ರಾಮಸ್ಥರು ಹಾಗೂ ಪ್ರಗತಿಪರ ಸಂಘಟನೆಗಳ ಪದಾಧಿ  ಕಾರಿಗಳು ಗ್ರಾಮಕ್ಕೆ ತೊಗರಿ ಖರೀದಿ ಕೇಂದ್ರ ಮಂಜೂರು ಮಾಡುವಂತೆ ಆಗ್ರಹಿಸಿದರು. ಈ ವೇಳೆ ಸಾಯಬಣ್ಣ ಬಾಗೇವಾಡಿ ಮಾತನಾಡಿ, ಗ್ರಾಮದ ಪಿಕೆಪಿಎಸ್‌ ವ್ಯಾಪ್ತಿಗೆ ಮೂರರಿಂದ ನಾಲ್ಕು ಗ್ರಾಮಗಳು ಬರುತ್ತಿದ್ದು ಈ ಗ್ರಾಮಗಳ ರೈತರಿಗೆ ಅನುಕೂಲವಾಗುವಂತೆ ತೊಗರಿ ಖರೀದಿ ಕೇಂದ್ರ ಆರಂಭಿಸಬೇಕು.

ಗ್ರಾಮದಲ್ಲಿ ಖರೀದಿ ಕೇಂದ್ರಕ್ಕೆ ಸಹಕಾರಿಯಾಗುವಂತೆ 150 ಟನ್‌ ಸಾಮರ್ಥ್ಯದ ಸಂಗ್ರಹಣಾಲಯಗಳು ಲಭ್ಯವಿವೆ. ಈ ಎಲ್ಲ ಕಾರಣಗಳನ್ನು ಪರಿಶೀಲಿಸಿ ಅಗತ್ಯವಾದ ಕೇಂದ್ರ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ರಾಜು ಮೆಟಗಾರ, ಮಲ್ಲು ಜಮಾದಾರ, ಆಕಾಶ ಬೂದಿಹಾಳ, ಉಮೇಶ ಇಂಗಳಗಿ, ಸೋಮಶೇಖರ ಹೊಸಮನಿ, ಬಸವರಾಜ ನಾಟೀಕಾರ,ಅರವಿಂದ , ಪರಶುರಾಮ ನಾಟೀಕಾರ, ಮಲಕಣ್ಣ ಸುಣಗಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next