Advertisement

ನಗರದ ರಸ್ತೆ ಸರಿಪಡಿಸಲು ಆಗ್ರಹ: ಪ್ರತಿಭಟನೆ

01:19 PM Sep 22, 2019 | Suhan S |

ಕೋಲಾರ: ನಗರದಲ್ಲಿ ರಸ್ತೆ ಕೂಡಲೇ ಸರಿಪಡಿಸುವಂತೆ ಹಾಗೂ ಬದಿಯಲ್ಲಿನ ಕಸ ತೆರವುಗೊಳಿಸುವಂತೆ ಆಗ್ರಹಿಸಿ, ಅರಹಳ್ಳಿ ಗೇಟ್‌ ಮಿಲ್ಲತ್‌ ನಗರದಲ್ಲಿ ಆರ್‌.ಪಿ.ಐನಿಂದ ಪ್ರತಿಭಟನೆ ನಡೆಸಿ, ನಗರಸಭೆ ಆಯುಕ್ತ ಶಿವಪ್ರಸಾದ್‌ಗೆ ಮನವಿ ಸಲ್ಲಿಸಲಾಯಿತು.

Advertisement

ಆರ್‌.ಪಿ.ಐ ಜಿಲ್ಲಾಧ್ಯಕ್ಷ ಬೇಟಪ್ಪ ಮಾತನಾಡಿ, ನಗರದಲ್ಲಿ ರಸ್ತೆಗಳು ಸಂಪೂ ರ್ಣವಾಗಿ ಹದಗೆಟ್ಟಿವೆ, ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರಿಗೆ ಶಾಲೆಯ ಮಕ್ಕಳಿಗೆ ಓಡಾಡಲು ತುಂಬಾ ತೊಂದರೆ ಯಾಗಿದೆ, ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ. ರಸ್ತೆ ಬದಿಗಳಲ್ಲಿ ಕಸದ ರಾಶಿಗಳು ಹೆಚ್ಚಾಗುತ್ತಿವೆ. ಇದರಿಂದ ಕೋಲಾರ ಈಗ ಹಳ್ಳಿಗಿಂತಲೂ ಹೀನಾ ಯವಾಗಿದೆ ಎಂದು ದೂರಿದರು.

ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕೂಡಲೇ ಆಗಿರುವ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಆರ್‌.ಪಿ.ಐ ಉಪಾ ಧ್ಯಕ್ಷ ಕುಪೇಂದ್ರ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್‌, ಯುವ ಘಟಕದ ಅಧ್ಯಕ್ಷ ಮುನೇಶ್‌, ಅಲ್ಪಸಂಖ್ಯಾತ ಜಿಲ್ಲಾಧ್ಯಕ್ಷ ಕೆ. ಕೆ.ಪ್ರಧಾನ ಕಾರ್ಯದರ್ಶಿ ಖದೀರ್‌, ತಾಲೂಕು ಅಧ್ಯಕ್ಷ ಮಕ್ಸೂದ್‌, ಬಂಗಾರಪೇಟೆ ತಾಲೂಕು ಅಧ್ಯಕ್ಷ ಸೈಯದ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next