Advertisement

ಸರಕಾರಿ ನೌಕರರ ರಕ್ಷ ಣೆಗೆ ಆಗ್ರಹಿಸಿ ನಿರಶನ

01:11 PM Feb 06, 2022 | Team Udayavani |

ಲಿಂಗಸುಗೂರು: ಹುಮನಾಬಾದ ತಹಶೀಲ್ದಾರ್‌ ಡಾ| ಪ್ರದೀಪ್‌ಕುಮಾರ ಹಿರೇಮಠ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ಅಖೀಲ ಭಾರತ ವೀರಶೈವ ಮಹಾಸಭಾ ಮುಖಂಡರು ಶನಿವಾರ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.

Advertisement

ಪಟ್ಟಣದ ಮಹಾಸಭಾ ಕಚೇರಿಯಿಂದ ಬಸ್‌ ನಿಲ್ದಾಣ, ಗಡಿಯಾರ ಚೌಕ್‌, ಅಂಚೆ ಕಚೇರಿ ಮೂಲಕ ಎಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ತಹಶೀಲ್ದಾರ್‌ ಡಾ| ಪ್ರದೀಪ ಕುಮಾರ ಮೇಲೆ ಹಾಕಿದ ಸುಳ್ಳು ಪ್ರಕರಣ ವಾಪಸ್‌ ಪಡೆದು ಪ್ರಕರಣಕ್ಕೆ ಸಂಬಂಧಿಸಿ ನಿಷ್ಪಕ್ಷಪಾತ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸಿ ರಾಹುಲ್‌ ಸುಂಕನೂರರಿಗೆ ಮನವಿ ಸಲ್ಲಿಸಲಾಯಿತು.

ಮಹಾಸಭಾ ತಾಲೂಕಾಧ್ಯಕ್ಷ ಶರಣಪ್ಪ ಮೇಟಿ, ಕಾರ್ಯದರ್ಶಿ ವಿರುಪಾಕ್ಷಪ್ಪ ದೇವದುರ್ಗ, ಡಾ| ಶಿವಬಸಪ್ಪ ಹೆಸರೂರು, ಮಹಾಂತಯ್ಯ ಪಂಚಾಕ್ಷರಿಮಠ, ಸಿದ್ಧನಗೌಡ, ಗಿರಿಮಲ್ಲನಗೌಡ ಕರಡಕಲ್‌, ಮಲ್ಲಣ್ಣ ವಾರದ, ರಮೇಶ ಶಾಸ್ತ್ರೀ, ವೀರನಗೌಡ ಬಯ್ನಾಪುರ, ಚಂದ್ರಪ್ಪಗೌಡ ಯರ್ದಿಹಾಳ, ದೊಡ್ಡನಗೌಡ ಹೊಸಮನಿ, ವೀರನಗೌಡ ಲೆಕ್ಕಿಹಾಳ, ಬಸವರಾಜಗೌಡ ಗಣೇಕಲ್‌, ಅಮರೇಶ ನಾಡಗೌಡ, ಪ್ರಭುಸ್ವಾಮಿ ಅತ್ತನೂರು, ಸುರೇಶಗೌಡ, ಮಹಾಂತೇಶ ಪಾಟೀಲ್‌, ಜಂಬಯ್ಯ ಹಿರೇಮಠ, ಶಂಕರಗೌಡ ಹಟ್ಟಿ, ಶರಣಯ್ಯಸ್ವಾಮಿ, ನಾಗರಡ್ಡೆಪ್ಪ, ಚನ್ನಾರಡ್ಡಿ ಬಿರಾದಾರ, ಅಮರೇಶ ತಾವರಗೇರ, ರಾಜು ತಂಬಾಕೆ, ಶಿವಕುಮಾರ ನಂದಿಕೋಲ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next