Advertisement

ಬೆಳೆಹಾನಿ ಪರಿಹಾರಕ್ಕೆ ಆಗ್ರಹ

06:34 PM Sep 24, 2020 | Team Udayavani |

ಯಡ್ರಾಮಿ: ತಾಲೂಕಿನಲ್ಲಿ ಕಳೆದ ಹದಿನೈದುದಿನಗಳಿಂದ ವ್ಯಾಪಕ ಮಳೆ ಸುರಿದ ಪರಿಣಾಮ ರೈತರ ಬೆಳೆ ಹಾಗೂ ಮನೆಗಳು ಹಾಳಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಅವರಿಗೆ ತುರ್ತು ಪರಿಹಾರ ನೀಡುವಂತೆ ಆಗ್ರಹಿಸಿ ತಾಲೂಕು ಕರವೇ (ನಾರಾಯಣಗೌಡ ಬಣ) ವತಿಯಿಂದ ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಹಗಲು ರಾತ್ರಿ ಎನ್ನದೆ ಸತತ ಬಿದ್ದ ಮಳೆಯಿಂದ ಹತ್ತಿ ಬೆಳೆ ವಿವಿಧ ರೋಗಬಾಧೆಯಿಂದ ಹಾಳಾಗುತ್ತಿದ್ದರೆ, ಭೂಮಿ ಅತಿ ಹೆಚ್ಚು ಹಸಿ ಆಗಿ ತೊಗರಿ ಬೆಳೆ ಒಣಗುತ್ತಿವೆ. ಇಷ್ಟೇ ಅಲ್ಲದೆ ಹಳ್ಳಿಗಳಲ್ಲಿನ ಮನೆಗಳ ಗೋಡೆಗಳು ಬಿದ್ದು ಹೋಗಿವೆ. ರೈತರು ಅನುಭವಿಸುತ್ತಿರುವ ಈ ತೊಂದರೆಗಳಿಗೆ ಪರಿಹಾರವಾಗಿ ಸರ್ಕಾರ ಪ್ರತಿ ಎಕರೆಗೆ 20,000 ರೂ.ಗಳನ್ನು ನೀಡಬೇಕು. ಹಾಳಾದ ಮನೆಗಳ ಸಮೀಕ್ಷೆ ಮಾಡಿಸಿ ಸೂಕ್ತ ಪರಿಹಾರ ವಿತರಿಸುವ ಮೂಲಕ ರೈತರನ್ನು ಸಂಕಷ್ಟದಿಂದ ಕೂಡಲೇ ಪಾರು ಮಾಡಬೇಕೆಂದು ಕರವೇ ಹೋರಾಟಗಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕರವೇ (ನಾರಾಯಣಗೌಡ ಬಣ) ಅಧ್ಯಕ್ಷ ದೇವಿಂದ್ರಪ್ಪಗೌಡ ಪೊಲೀಸ್‌ಪಾಟೀಲ,ಕಾರ್ಯದರ್ಶಿ ಮಹೇಶ ಮಾಲೀಪಾಟೀಲ, ಹಣಮಂತ್ರಾಯ ದುದ್ದಣಗಿ, ಲಕ್ಷ್ಮಣ ಕಲ್ಲೂರ, ಶಂಕರ ಬಿಳವಾರ, ರವಿಕುಮಾರ ಪಿ, ಆನಂದ ದೇವರಮನಿ, ಸುಧೀರ ಕಲ್ಲೂರ, ನಿಖೀಲ ಅರಳಗುಂಡಗಿ, ದತ್ತು ಮರಾಠಿ, ವಿಶ್ವನಾಥ ಗೌಂಡಿ ಇದ್ದರು.

…………………………………………………………………………………………………………………………………………………….

ಕೆಕೆಆರ್‌ಡಿಬಿಗೆ ಅನುದಾನ ನೀಡಿ : ಕಲಬುರಗಿ: ಈ ಭಾಗದ ಅಭಿವೃದ್ಧಿ ನಿಟ್ಟಿನಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಗೆ 2 ಸಾವಿರ ಕೋ.ರೂ. ಅನುದಾನ ನಿಗದಿ ಮಾಡುವಂತೆ, ಸತತ ಮಳೆಯಿಂದ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಹಾಗೂ ಈ ಭಾಗಕ್ಕೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಜೈ ಕನ್ನಡಿಗರ ರಕ್ಷಣಾ ವೇದಿಕೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

Advertisement

ಕಳೆದ ವರ್ಷ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಬಂದಾಗ ಎರಡು ಸಾವಿರ ಕೋ.ರೂ. ನೀಡುವುದಾಗಿ ಹೇಳಿದ್ದರು. ಆದರೆ ಮೊನ್ನೆ ಬಂದಾಗ ಯಾವುದೇ ಚಕಾರವೆತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಾದರೂ ನುಡಿದಂತೆ ಅನುದಾನ ಬಿಡುಗಡೆಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಅನ್ನಪೂರ್ಣ ಕ್ರಾಸ್‌ದಿಂದ ಆರ್‌ಟಿಒ ವರೆಗಿನ ರಸ್ತೆ ಅಗಲೀಕರಣ ಜತೆಗೆ ಸರಿಯಾದ ನಿಟ್ಟಿನಲ್ಲಿ ಅಭಿವೃದ್ಧಿಯಾಗಬೇಕೆಂದು ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.

ವೇದಿಕೆಯ ರಾಜ್ಯಾಧ್ಯಕ್ಷ ಸಚಿನ್‌ ಫ‌ರತಾಬಾದ್‌, ಮಲ್ಲಿಕಾರ್ಜುನ ನೀಲೂರ, ಪ್ರವೀಣ ಸಚಿನ್‌, ಅಕ್ಷಯ ಸಚಿನ್‌ ಪೂಜಾರಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next