Advertisement
ಜಿಲ್ಲಾ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದಿಂದ ಧರಣಿ ಮಾಡಲಾಯಿತು. ಅಳ್ವೆಕೋಡಿ ಪ್ರವೀಣ್ಕುಮಾರ ಶೆಟ್ಟಿ ಮಾತನಾಡಿ, ಅಂಗವಿಕಲರ ಕಲ್ಯಾಣಕ್ಕೆ ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ಸಭೆ ಮಾಡಬೇಕು ಎಂದು ಒತ್ತಾಯಿಸಿದರು. ಅಂಗವಿಕಲರ ಮಾಸಿಕ ವೇತನವನ್ನು ಕನಿಷ್ಠ 3 ಸಾವಿರ ಕೊಡಬೇಕು. ಶೇ.75 ನ್ಯೂನ್ಯತೆಗಳಿರುವವರಿಗೆ 5 ಸಾವಿರ ಮಾಸಿಕ ವೇತನ ಕೊಡಬೇಕು. ಸುಪ್ರಿಂಕೋರ್ಟ್ ನಿರ್ದೇಶನವನ್ನು ಕೇಂದ್ರ-ರಾಜ್ಯ ಸರ್ಕಾರಗಳು ಜಾರಿಗೆ ತರಬೇಕು. ಅಂಗವಿಕಲರ ಕಲ್ಯಾಣಕ್ಕೆ 2013ರಲ್ಲಿರೂಪಿಸಲಾದ ಕಾಯಿದೆಯನ್ನು ಇದೇ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಬೇಕು.
ಮಾದರಿಯ ಗುರುತಿನ ಚೀಟಿ ನೀಡಬೇಕು, ರೈಲ್ವೆ ಮತ್ತು ಆಸ್ಪತ್ರೆಯಲ್ಲಿ ವೈದ್ಯರು ಅಂಗವಿಕಲರಿಗೆ ಹೆಚ್ಚು ಕಿರುಕುಳ ನೀಡುತ್ತಿದ್ದಾರೆ. ಇದನ್ನು ನಿಯಂತ್ರಿಸಬೇಕೆಂದು ಕೇಂದ್ರ, ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದರು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಂದಿದ್ದ 53 ವಿಕಲಚೇತನರು ಹಾಗೂ ವಿಕಲಚೇತನರ ಸಂಘದ ಪ್ರಧಾನ ಕಾರ್ಯದರ್ಶಿ ಸದಾಶಿವ ಗಾವಡಿ, ಚಂದ್ರಶೇಖರ ತಿಮ್ಮಪ್ಪ ನಾಯ್ಕ, ಸೂರ್ಯಕಾಂತ, ಮಿನಿನ್ ಡಿಸೋಜಾ, ಸದಾನಂದ ಎಂ.ನಾಯ್ಕ, ಸಂತೋಷ, ಉದಯ್, ಕರಿಯಮ್ಮ ಮುಂತಾದವರು ಭಾಗವಹಿಸಿದ್ದರು.