Advertisement

ಕಲ್ಲು ಗಣಿಗಾರಿಕೆ ನಿಷೇಧಕ್ಕಾಗಿ ಪಾದಯಾತ್ರೆ

11:17 AM Aug 09, 2020 | Suhan S |

ಶ್ರೀರಂಗಪಟ್ಟಣ: ಕೆಆರ್‌ಎಸ್‌ ಜಲಾಶಯದ 20 ಕಿ. ಮೀ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಿಷೇಧಿಸಬೇಕು ಎಂದು ಆಗ್ರಹಿಸಿ, ಪ್ರಗತಿಪರ ಸಂಘಟನೆಗಳು ಆ.10 ರಂದು ಕೆಆರ್‌ಎಸ್‌ನಿಂದ ಶ್ರೀರಂಗಪಟ್ಟಣವರೆಗೆ ಪಾದಯಾತ್ರೆ ನಡೆಸಲಿವೆ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜೇಶ್‌ ಗೌಡ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆ.10ರ ಬೆಳಗ್ಗೆ 10 ಗಂಟೆಗೆ ಕೆಆರ್‌ಎಸ್‌ ಮುಖ್ಯ ದ್ವಾರದಿಂದ ಪಾದಯಾತ್ರೆ ಆರಂಭವಾಗಲಿದೆ. ಹುಲಿಕೆರೆ, ಬೆಳಗೊಳ, ಪಂಪ್‌ಹೌಸ್‌, ಪಾಲಹಳ್ಳಿ ಮಾರ್ಗವಾಗಿ ಶ್ರೀರಂಗ ಪಟ್ಟಣ ತಾಲೂಕು ಕಚೇರಿ ತಲುಪಲಿದೆ. ಕಾವೇರಿ- ಕೆಆರ್‌ಎಸ್‌ ಉಳಿವಿಗಾಗಿ ಜನಾಂದೋಲನ ಸಮಿತಿ ರಚಿಸಿದ್ದು, ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು, ಚಿಂತಕರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

85 ವರ್ಷಗಳ ಇತಿಹಾಸವಿರುವ ಕೆಆರ್‌ಎಸ್‌ ಅಣೆ ಕಟ್ಟೆಯ ಕಲ್ಲುಗಣಿ ಸ್ಫೋಟ ಮತ್ತು ಭೂಮಿ ಕುಸಿತದಿಂದ ರಕ್ಷಣೆ ಮಾಡಿ, ಇದರ ಸುರಕ್ಷತೆಗಾಗಿ ಮಂಡ್ಯ ಜಿಲ್ಲೆಯ ಅಕ್ರಮ ಗಣಿಗಾರಿಕೆಯನ್ನು ನಿಷೇಧಕ್ಕೆ ಸಮಿತಿ ಸದಸ್ಯರು ಒತ್ತಾಯ ಮಾಡಲಿದ್ದಾರೆ. ಪಾದಯಾತ್ರೆಯ ನಂತರ ಅಂದೇ ಮಧ್ಯಾಹ್ನ 3 ಗಂಟೆಗೆ ತಾಲೂಕು ಕಚೇರಿ ಎದುರು ಬಹಿರಂಗ ಸಭೆ ನಡೆಯಲಿದೆ. ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳ ಹೆಸರಾಂತ ಚಳವಳಿಗಾರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌, ದಲಿತ ಸಂಘಟನೆ ಸಂಚಾ ಲಕ ನಂಜುಂಡ ಮೌರ್ಯ, ರೈತ ಸಂಘದ ಸಂಚಾಲಕ ನಾಗೇಂದ್ರಸ್ವಾಮಿ, ಕರವೇ ಹರೀಶ್‌ಗೌಡ, ಮುಂಡಗ ದೊರೆ ಮೋಹನ, ತೇಜು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next