Advertisement

ಕಸ ವಿಲೇವಾರಿ ಮಾಡಲು ಆಗ್ರಹ

04:05 PM Dec 10, 2018 | Team Udayavani |

ಕೆಜಿಎಫ್: ಇಲ್ಲಿನ ಆಂಡರ್ಸನ್‌ ಪೇಟೆಯ 32 ನೇ ವಾರ್ಡಿನ ಮುನಿವೆಂಕಟಪ್ಪ ಬಡಾವಣೆಗೆ ಹೋಗುವ ರಸ್ತೆಯಲ್ಲಿ ನಗರಸಭೆ ಸಿಬ್ಬಂದಿಯೇ ಕಸ ಹಾಕುತ್ತಿದ್ದಾರೆ ಎಂದು ಆರೋಪಿಸಿ ವಾರ್ಡಿನ ನಿವಾಸಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೆಳಗ್ಗೆ ರಸ್ತೆಗೆ ಕೈಗಾಡಿಯಲ್ಲಿ ಕಸವನ್ನು ಸಂಗ್ರಹಿಸಿಕೊಂಡು ಬರುತ್ತಿದ್ದ ಮಹಿಳಾ ಸಿಬ್ಬಂದಿಯನ್ನು ತಡೆದ ಸ್ಥಳೀ ಯರು ಕಸ ಹಾಕದಂತೆ ತಾಕೀತು ಮಾಡಿದರು. ಮುನಿವೆಂಕಟಪ್ಪ ಬಡಾವಣೆಗೆ ಹೋಗುವ ರಸ್ತೆಯಲ್ಲಿ ಕಾಂಕ್ರಿಟ್‌ ರಸ್ತೆ ಇದೆ. ಈ ರಸ್ತೆ ಕಿರಿದಾಗಿದೆ. ಇದರ ಮೂಲ ಕವೇ ಜನ ಓಡಾಡಬೇಕು. ಈಗ ರಸ್ತೆಯನ್ನೇ ಕಸದ ತೊಟ್ಟಿಯನ್ನಾಗಿ
ನಗರಸಭೆ ಸಿಬ್ಬಂದಿ ಮಾಡಿಕೊಂಡಿದ್ದಾರೆ. 

Advertisement

ಇದರಿಂದಾಗಿ ಓಡಾಡಲು ಕಷ್ಟವಾಗುತ್ತಿದೆ ಎಂದು ಬಡಾವಣೆ ನಿವಾಸಿಗಳು ದೂರಿದರು. ಕಸ ಸುರಿಯುತ್ತಿರುವ ಕುರಿತು ಆರೋಗ್ಯಾಧಿಕಾರಿ ಸರಸ್ವತಿ ಅವರಿಗೆ ಈಗಾಗಲೇ ಹಲವಾರು ಬಾರಿ ದೂರು ನೀಡಲಾಗಿದೆ. ಅವರು ನಿರ್ಲಕ್ಷ್ಯ ವಹಿಸಿದ್ದಾರೆ. ಕಸ ವಿಲೇವಾರಿ ಮಾಡಲು ಕ್ರಮ ಕೈಗೊಂಡಿಲ್ಲ ಎಂದು ವಾರ್ಡಿನ ಸದಸ್ಯೆ ವೀಣಾ ದೂರಿದರು. ಹಾಗೆಯೇ 20 ದಿನಗಳಿಂದ ಕಸ ಇರುವುದರಿಂದ ನೀರಿನ ಟ್ಯಾಂಕರ್‌ ಬರು ತ್ತಿಲ್ಲ. ವಾರ್ಡಿನ ಉಸ್ತುವಾರಿ ವಹಿಸಿ ಕೊಳ್ಳುವ ಮೇಸ್ತ್ರೀ ಜಯರಾಂ ಬೆದರಿಕೆ ಹಾಕುತ್ತಾರೆ. ಗುಂಪು ಕಟ್ಟಿಕೊಂಡು ಬೆದರಿ ಸುತ್ತಾರೆ ಎಂದು ನಾಗರಿಕರು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next