Advertisement

ಸರ್ಕಾರದ ಸಾಧನೆ ಜನರಿಗೆ ತಲುಪಿಸಿ: ಸತೀಶ್‌ 

07:24 PM Nov 21, 2017 | Team Udayavani |

ಸಂಡೂರು: ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ಈ ನಾಡಿನ ಜನರಿಗೆ ಉಚಿತ ಅನ್ನಭಾಗ್ಯ ಯೋಜನೆ ಜಾರಿಗೆ ತಂದ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿದ್ದಾರೆ. ಆದರೆ ಕಪ್ಪುಹಣ ತರುತ್ತೇವೆ ಎಂದು ನರೇಂದ್ರ ಮೋದಿಯವರು ಇಂದಿಗೂ ಸಹ ಅದನ್ನು ಹೊರ ತಂದಿಲ್ಲ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಚಿತ್ರಿಕಿ ಸತೀಶ್‌ ಆರೋಪಿಸಿದರು.

Advertisement

ತಾಲೂಕಿನ ಸೋವೆನಹಳ್ಳಿ ಗ್ರಾಮದಲ್ಲಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿದ್ದ ಮನೆ ಮನೆಗೆ ಕಾಂಗ್ರೆಸ್‌ ಅಭಿಯಾನಕ್ಕೆ  ಚಾಲನೆ ನೀಡಿ ಮಾತನಾಡಿದ ಅವರು, ನುಡಿದಂತೆ ನಡೆಯಿತು ಕಾಂಗ್ರೆಸ್‌ ಸರ್ಕಾರ. ಆದರೆ ಮಾತುಕೊಟ್ಟು ಮರೆಯಿತು ಕೇಂದ್ರದ ಬಿಜೆಪಿ ಸರ್ಕಾರ. ನಿತ್ಯ ಒಂದಲ್ಲಾ ಒಂದು ಬೆಲೆ ಏರುತ್ತಿದೆ. ಜಿಎಸ್‌ಟಿ ಬಡವರಿಗೆ, ಸಣ್ಣ ಉದ್ದಿಮೆದಾರರಿಗೆ ತೊಂದರೆ ಉಂಟು
ಮಾಡಿದೆ. ನೋಟು ಅಮಾನ್ಯದಂತಹ ಅವೈಜ್ಞಾನಿಕ ಕ್ರಮದಿಂದ ಹಲವಾರು ಜನರು ಬೀದಿಗೆ ಬೀಳುವಂತಾಯಿತು ಎಂದು ದೂರಿದರು. 

ಕಪ್ಪುಹಣ ವಿದೇಶದಿಂದ ವಾಪಸ್‌ ತಂದು ದೇಶದ ಪ್ರತಿ ಪ್ರಜೆಯ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಮೋದಿಯವರು ಘೋಷಿಸಿದ್ದರು. ಆದರೆ ಈವರೆಗೂ ಅವರ ಖಾತೆ ನಯಾಪೈಸೆ ಬಿದ್ದಿಲ್ಲ. ಅಲ್ಲದೆ ಈವರೆಗೂ ಕಪ್ಪುಹಣ ಹೊರ ತರಲು ಆಗಲಿಲ್ಲ ಎಂದು ಆರೋಪಿಸಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಆಶಾಲತಾ ಸೋಮಪ್ಪ, ಯುವ ಕಾಂಗ್ರೆಸ್‌ ಅಧ್ಯಕ್ಷ ನಾಗರಾಜ, ತಾಪಂ
ಸದಸ್ಯರಾದ ಹನುಮಂತಪ್ಪ, ಜಿಪಂ ಸದಸ್ಯೆ ನೇತ್ರಾವತಿ ಕರಿಬಸಪ್ಪ, ಗ್ರಾಪಂ ಸದಸ್ಯರು ಇದ್ದರು. ತಾಲೂಕಿನ ಅಗ್ರಹಾರ, ಲಕ್ಕಲಹಳ್ಳಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಮನೆ ಮನೆಗೆ ಕಾಂಗ್ರೆಸ್‌ ನಡಿಗೆ ಕಾರ್ಯಕ್ರಮ ನಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next