Advertisement

ಕಳೆಗೆ ಬೆಂಕಿ: ದೆಹಲಿ ವಾಯು ಗುಣಮಟ್ಟ ಹೆಚ್ಚು ವಿಷಮಯ

09:33 PM Oct 29, 2022 | Team Udayavani |

ನವದೆಹಲಿ: ಪಂಜಾಬ್‌ ಮತ್ತು ಹರ್ಯಾಣದಲ್ಲಿ ಕಳೆದ ಒಂದು ದಿನದಿಂದ ರೈತರು ಕಳೆ ಸುಡುತ್ತಿರುವ ಪ್ರಕರಣಗಳು ದುಪ್ಪಟ್ಟಾಗಿದ್ದು, ಇದರಿಂದ ಪಕ್ಕದ ದೆಹಲಿಯಲ್ಲಿ ವಾಯು ಗುಣಮಟ್ಟು ಹೆಚ್ಚು ವಿಷಮಯವಾಗಿದೆ.

Advertisement

ಕಳೆಗೆ ಬೆಂಕಿ ಇಡುತ್ತಿರುವ ಕಾರಣದಿಂದಾಗಿ ದೆಹಲಿಯ ವಾಯು ಗುಣಮಟ್ಟ ಶೇ.21ರಷ್ಟು ಹದಗೆಟ್ಟಿದೆ. ಇದು ಈ ಋತುವಿನಲ್ಲಿ ಎರಡನೇ ಅತ್ಯಧಿಕವಾಗಿದೆ.

ಇದೇ ರೀತಿ ಪಕ್ಕದ ನೊಯ್ಡಾದಲ್ಲೂ ವಾಯು ಮಾಲಿನ್ಯ ಅಧಿಕವಾಗಿದೆ. ಅನೇಕ ಸ್ಥಳಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು ಅತ್ಯಂತ ಕಳಪೆ ಮಟ್ಟಕ್ಕೆ ಇಳಿದಿದೆ. ಇದು ಈ ಋತುವಿನಲ್ಲಿ ವಾಯು ಗುಣಮಟ್ಟವು ಅತ್ಯಂತ ಹೆಚ್ಚು ವಿಷಮಯವಾಗಿದೆ.

ಶುಕ್ರವಾರ ಪಂಜಾಬ್‌ನಲ್ಲಿ 2,067 ಸ್ಥಳಗಳಲ್ಲಿ ರೈತರು ಕಳೆ ಸುಟ್ಟಿದ್ದಾರೆ. ಅದೇ ರೀತಿ ಹರ್ಯಾಣದಲ್ಲಿ 206 ಸ್ಥಳಗಳಲ್ಲಿ ರೈತರು ಕಳೆ ಸುಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next