Advertisement

ರೈಲಲ್ಲೂ ಕಾರ್ಗಿಲ್‌ ನೆನಪು

01:02 PM Jul 18, 2019 | Sriram |

ಹೊಸದಿಲ್ಲಿ: ಕಾರ್ಗಿಲ್‌ ವಿಜಯಕ್ಕೆ 20 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರೈಲುಗಳ ಮೇಲೆ ಯುದ್ಧದ ಕುರಿತಾದ ಮಾಹಿತಿ ಹಾಗೂ ಚಿತ್ರಗಳನ್ನು ಪ್ರದರ್ಶಿಸಲು ನಿರ್ಧರಿಸಲಾಗಿದೆ.

Advertisement

ಈ ನಿಟ್ಟಿನಲ್ಲಿ ಮೊದಲು ದಿಲ್ಲಿ-ವಾರಾಣಸಿ ಕಾಶಿ ವಿಶ್ವನಾಥ ಎಕ್ಸ್‌ಪ್ರೆಸ್‌ ಮೇಲೆ ಕಾರ್ಗಿಲ್‌ ವಿಜಯವನ್ನು ಸ್ಮರಿಸುವ ಚಿತ್ರ ಪ್ರದರ್ಶಿಸಲಾಗುತ್ತದೆ. ಇದಕ್ಕಾಗಿ ಈ ರೈಲಿಗೆ ವಿನೈಲ್‌ ಹಾಳೆಗಳನ್ನು ಅಂಟಿಸಲಾಗುತ್ತದೆ. ಅದರ ಮೇಲೆ ಯುದ್ಧದ ಚಿತ್ರಗಳನ್ನು ಚಿತ್ರಿಸಲಾಗುತ್ತದೆ ಹಾಗೂ ಕಾರ್ಗಿಲ್‌ ವಿಜಯ್‌ ದಿವಸ ಎಂದು ಬರೆಯಲಾಗುತ್ತದೆ. ಇದೇ ರೀತಿ 10 ರೈಲುಗಳ ಮೇಲೂ ಪ್ರದರ್ಶಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ರೀತಿಯಾಗಿ ಪ್ರದರ್ಶಿಸಿದ ದಿಲ್ಲಿ-ವಾರಾಣಸಿ ಕಾಶಿ ವಿಶ್ವನಾಥ ರೈಲಿಗೆ ಸೋಮವಾರ ಕೇಂದ್ರ ಸಚಿವ ಹರ್ಷವರ್ಧನ್‌, ರೈಲ್ವೆ ಖಾತೆ ಸಹಾಯಕ ಸಚಿವ ಸುರೇಶ್‌ ಅಂಗಡಿ ಹಾಗೂ ಬಿಜೆಪಿ ಸಂಸದೆ ಮೀನಾಕ್ಷಿ ಲೇಖೀ ಹೊಸದಿಲ್ಲಿಯಲ್ಲಿ ಹಸಿರು ನಿಶಾನೆ ತೋರಿದರು.

Advertisement

Udayavani is now on Telegram. Click here to join our channel and stay updated with the latest news.

Next