Advertisement

ದಿಲ್ಲಿ -ವೈಷ್ಣೋದೇವಿ: 8 ಗಂಟೆ ಪಯಣ

11:36 AM Jun 29, 2019 | sudhir |

ಹೊಸದಿಲ್ಲಿ: ಜಮ್ಮು – ಕಾಶ್ಮೀರ ದಲ್ಲಿರುವ ವೈಷ್ಣೋದೇವಿಗೆ ಹೋಗಲು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಹೊಸದಿಲ್ಲಿಯಿಂದ ಕಟ್ರಾಗೆ ಇನ್ನು ಎಂಟು ಗಂಟೆಗಳಲ್ಲಿ ತಲುಪಲು ಸಾಧ್ಯವಿದೆ. ದೇಶದ ಮೊದಲ ಸೆಮಿ-ಹೈಸ್ಪೀಡ್‌ ರೈಲು- “ವಂದೇ ಭಾರತ್‌ ಎಕ್ಸ್‌ಪ್ರೆಸ್‌’ ಶೀಘ್ರವೇ ಸೇವೆ ಆರಂಭಿಸಲಿದೆ. ಇದರಿಂದಾಗಿ ಹೊಸದಿಲ್ಲಿಯಿಂದ ಕಟ್ರಾ ನಡುವಿನ ಪ್ರಯಾಣ ಅವಧಿ 2 ಗಂಟೆಗಳಷ್ಟು ಇಳಿಕೆಯಾಗಲಿದೆ. ಸದ್ಯ ರಾಷ್ಟ್ರ ರಾಜಧಾನಿಯಿಂದ ಕಟ್ರಾಗೆ 10-12 ಗಂಟೆಗಳಷ್ಟು ರೈಲು ಪ್ರಯಾಣ ವಿದೆ. ಪ್ರತಿ ಗಂಟೆಗೆ 130 ಕಿಮೀ ವೇಗದಲ್ಲಿ ಚಲಿಸಲಿರುವ “ವಂದೇ ಭಾರತ್‌ ಎಕ್ಸ್‌ಪ್ರೆಸ್‌’ ರೈಲಿನ ಪರೀಕ್ಷಾರ್ಥ ಸಂಚಾರ ಯಶಸ್ವಿಯಾ ದರೆ ಅನುಕೂಲವಾ ಗಲಿದೆ. ಅಂಬಾಲ, ಲೂಧಿ ಯಾನ, ಜಮ್ಮು ತಾವಿಯಲ್ಲಿ ನಿಲುಗಡೆ ಕೊಡಲು ರೈಲ್ವೆ ಇಲಾಖೆ ನಿರ್ಧರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next