Advertisement

ದಿಲ್ಲಿ  ವಾಯ್ಯು ಮಾಲಿನ್ಯ: ಐಸಿಸಿಗೆ ಶ್ರೀಲಂಕಾ ದೂರು

01:09 PM Dec 08, 2017 | |

ಕೊಲಂಬೊ: ತೃತೀಯ ಟೆಸ್ಟ್‌ ಪಂದ್ಯದ ವೇಳೆ ಹೊಸದಿಲ್ಲಿಯಲ್ಲಿ ಕಾಡಿದ ವಾಯು ಮಾಲಿನ್ಯಕ್ಕೆ ಸಂಬಂಧಿಸಿ ದಂತೆ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಐಸಿಸಿಗೆ ದೂರು ಸಲ್ಲಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಅದು ಕ್ರಿಕೆಟ್‌ ಆಡಳಿತ ಸಂಸ್ಥೆಯಲ್ಲಿ ಕೇಳಿಕೊಂಡಿದೆ.

Advertisement

“ನಮ್ಮ 4 ಮಂದಿ ಆಟಗಾರರು ಈ ಪಂದ್ಯದ ವೇಳೆ ವಾಂತಿ ಮಾಡಿಕೊಂಡರು. ಇಂಥ ಸ್ಥಿತಿಯಲ್ಲಿ ಆಡುವುದಾದರೂ ಹೇಗೆ?’ ಎಂದು ದೂರಿಗೆ ಸಂಬಂಧಿಸಿದಂತೆ ಲಂಕಾ ಕ್ರೀಡಾ ಸಚಿವ ದಯಾಸಿರಿ ಜಯಶೇಖರ ಮಾಧ್ಯಮದವರಲ್ಲಿ ಪ್ರಶ್ನಿಸಿದ್ದಾರೆ. 

ಒಂದು ಸಂದರ್ಭದಲ್ಲಂತೂ ಬದಲಿ ಆಟಗಾರರಾಗಿ ಶ್ರೀಲಂಕಾದ ತಂಡದ ಸಹಾಯಕ ಸಿಬಂದಿಗಳೇ ಬಿಳಿ ಉಡುಗೆ ಧರಿಸಿ ಅಂಗಳಕ್ಕಿಳಿಯುವ ಸ್ಥಿತಿ ನಿರ್ಮಾಣವಾಗಿತ್ತು ಎಂದು ಶ್ರೀಲಂಕಾ ದೂರಿನಲ್ಲಿ ಉಲ್ಲೇಖೀಸಿದೆ.

Advertisement

Udayavani is now on Telegram. Click here to join our channel and stay updated with the latest news.

Next