Advertisement

ಶರಣಾಗುವುದೇ ಸುಲಭ ಮಾರ್ಗ: ಹನಿಪ್ರೀತ್‌ಗೆ ದಿಲ್ಲಿ ಹೈಕೋರ್ಟ್‌

07:08 PM Sep 26, 2017 | Team Udayavani |

ಹೊಸದಿಲ್ಲಿ : ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ಗುರ್ಮಿತ್‌ ರಾಮ್‌ ರಹೀಂ ಸಿಂಗ್‌ ನ ದತ್ತು ಪುತ್ರಿ ಹನಿಪ್ರೀತ್‌ ಇನ್ಸಾನ್‌ ಸಲ್ಲಿಸಿದ್ದ ಜಾಮೀನು ಕೋರಿಕೆ ಅರ್ಜಿಯ ಮೇಲಿನ ಆದೇಶವನ್ನು ದಿಲ್ಲಿ ಹೈಕೋರ್ಟ್‌ ಕಾದಿರಿಸಿದೆ.

Advertisement

“ಪೊಲೀಸರಿಗೆ ಶರಣಾಗುವುದೇ ಎಲ್ಲಕ್ಕಿಂತ ಸುಲಭದ ಮಾರ್ಗವಾಗಿದೆ’ ಎಂದು ಜಸ್ಟಿಸ್‌ ಸಂಗೀತಾ ಧಿಂಗ್ರಾ ಅವರು ಹನಿಪ್ರೀತ್‌ಗೆ ಸಲಹೆ ನೀಡಿದ್ದಾರೆ. 

ಡೇರಾ ಮುಖ್ಯಸ್ಥನ ವಿರುದ್ಧ 20 ವರ್ಷಗಳ ಜೈಲು ಶಿಕ್ಷೆಯ ತೀರ್ಪು ಹೊರ ಬಂದ ದಿನ ವ್ಯಾಪಕ ಪ್ರತಿಭಟನಾ ಹಿಂಸೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಹನಿಪ್ರೀತ್‌ ಹರಿಯಾಣ ಪೊಲೀಸರಿಗೆ ಬೇಕಾಗಿದ್ದು ಅವರು ಅರೆಸ್ಟ್‌ ವಾರಂಟ್‌ ಸಜ್ಜಿತರಾಗಿ, ತಲೆಮರೆಸಿಕೊಂಡಿರುವ ಹನಿಪ್ರೀತ್‌ಗಾಗಿ ಎಲ್ಲೆಡೆ ಶೋಧಿಸುತ್ತಿದ್ದಾರೆ. 

ಹನಿಪ್ರೀತ್‌ ಳ ಜಾಮೀನು ಕೋರಿಕೆ ಅರ್ಜಿಯನ್ನು ಆಕೆಯ ವಕೀಲರು ದಿಲ್ಲಿ ಹೈಕೋರ್ಟಿಗೆ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next