Advertisement

Delhi ಅಬಕಾರಿ ಕೇಸ್‌: ದಿಲ್ಲಿ ಸಚಿವ ಕೈಲಾಶ್‌ಗೂ ಸಂಕಷ್ಟ?

01:39 AM Mar 31, 2024 | Team Udayavani |

ಹೊಸದಿಲ್ಲಿ: ಸಿಎಂ ಅರವಿಂದ್‌ ಕೇಜ್ರಿವಾಲ್‌ ಬಂಧನ ಬೆನ್ನಲ್ಲೇ ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ಆಪ್‌ನ ಮತ್ತೂಬ್ಬ ನಾಯಕ, ದಿಲ್ಲಿ ಸಚಿ ವರ ಕೈಲಾಶ್‌ ಗೆಹ್ಲೋಟ್‌ಗೂ ಸಂಕಷ್ಟ ಎದುರಾಗಿದೆ. ಪ್ರಕ ರಣ ಸಂಬಂಧ ಗೆಹ್ಲೋಟ್‌ರನ್ನು ಜಾರಿ ನಿರ್ದೇಶ ನಾಲಯ(ಇ.ಡಿ.)ಶನಿವಾರ ವಿಚಾರಣೆ ನಡೆಸಿದೆ.

Advertisement

ನಜಾಫ್ಗಢ ಶಾಸಕರಾಗಿರುವ ಸಾರಿಗೆ ಸಚಿವ ಕೈಲಾಶ್‌, ದಿಲ್ಲಿಯ ಇ.ಡಿ. ಕಚೇರಿಗೆ ಶನಿವಾರ ಹಾಜರಾದರು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಕೈಲಾಶ್‌ ಹೇಳಿಕೆಯನ್ನು ಇ.ಡಿ. ದಾಖಲಿಸಿಕೊಂಡಿದೆ. ಜತೆಗೆ ಹಗರಣಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದೆ ಎಂದು ಮೂಲಗಳು ತಿಳಿಸಿವೆ. ಅಬಕಾರಿ ನೀತಿಯನ್ನು ರೂಪಿಸಿದ ಸಚಿವರ ಸಮೂಹದಲ್ಲಿ ಕೈಲಾಶ್‌ ಕೂಡ ಇದ್ದರು.

ಸರಕಾರಿ ಸಾಕ್ಷಿಯ ತಂದೆಗೆ ಟಿಕೆಟ್‌: ಮೊದಲೇ ಹೇಳಿರಲಿಲ್ವಾ ಎಂದ ಆಪ್‌
ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ಸರಕಾರಿ ಸಾಕ್ಷಿ ಯಾಗಿ ಬದಲಾಗಿರುವ ರಾಘವ್‌ ಮುಗುಂತಾ ರೆಡ್ಡಿ ಅವರ ತಂದೆ, 4 ಬಾರಿ ಸಂಸದ ಶ್ರೀನಿವಾಸಲು ರೆಡ್ಡಿಗೆ ಟಿಡಿಪಿ ಟಿಕೆಟ್‌ ನೀಡಿದೆ. “ಬಿಜೆಪಿ ಜತೆ ರೆಡ್ಡಿ ನಂಟು ಹೊಂದಿದ್ದಾರೆಂದು ನಾವು ಮೊದಲೇ ಹೇಳಿದ್ದೆವು. ಬಂಧನ ಬಳಿಕ ಆತ ಬಿಜೆಪಿಗೆ ದೇಣಿಗೆ ನೀಡಿದ್ದಾನೆ. ಶ್ರೀನಿವಾಸಲು ಟಿಡಿಪಿಯಿಂದ ಕಣ ಕ್ಕಿಳಿದಿದ್ದಾರೆ’ ಎಂದು ಆಪ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next