Advertisement

ದಿಲ್ಲಿ ರಾಜಕೀಯ ಪ್ರಹಸನಕ್ಕೆ ಪ್ರಧಾನಿ ಕುರುಡು: ರಾಹುಲ್‌ ಆಕ್ರೋಶ

07:17 PM Jun 18, 2018 | Team Udayavani |

ಹೊಸದಿಲ್ಲಿ : ದಿಲ್ಲಿಯಲ್ಲಿ ನಡೆಯುತ್ತಿರುವ ರಾಜಕೀಯ ಪ್ರಹಸನಕ್ಕೆ ದಿಲ್ಲಿಗರು ಬಲಿಪಶುಗಳಾಗಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಆಮ್‌ ಆದ್ಮಿ ಪಕ್ಷ ಮತ್ತು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

Advertisement

ಈ ರಾಜಕಿಯ ಪ್ರಹಸನಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ ತೋರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ದಿಲ್ಲಿಯಲ್ಲಿನ ಅರಾಜಕತೆಗೆ ಕಾರಣರಾಗಿದ್ದಾರೆ ಎಂದು ರಾಹುಲ್‌ ದೂರಿದ್ದಾರೆ.

ರಾಹುಲ್‌ ತಮ್ಮ ಟ್ವಿಟರ್‌ನಲ್ಲಿ ಗುಡುಗಿರುವ ರೀತಿ ಹೀಗಿದೆ :

ದಿಲ್ಲಿ ಸಿಎಂ ಎಲ್‌ಜಿ ಆಫೀಸಿನಲ್ಲಿ ಧರಣಿ ಕೂತಿದ್ದಾರೆ; ಬಿಜೆಪಿ ದಿಲ್ಲಿ ಸಿಎಂ ನಿವಾಸದಲ್ಲಿ ಧರಣಿ ಕೂತಿದೆ; ದಿಲ್ಲಿ ಸರಕಾರಿ ಅಧಿಕಾರಿಗಳು ಪತ್ರಿಕಾ ಗೋಷ್ಠಿ ನಡೆಸುತ್ತಿದ್ದಾರೆ; ಈ ಎಲ್ಲ ಅರಾಜಕತೆಗೆ ಪ್ರಧಾನಿ ಕುರಡರಾಗಿದ್ದಾರೆ; ಪರೋಕ್ಷವಾಗಿ ರಾಷ್ಟ್ರ ರಾಜಧಾನಿಯಲ್ಲಿ ಅರಾಜಕತೆ, ಅವ್ಯವಸ್ಥೆಗೆ ಕಾರಣರಾಗಿದ್ದಾರೆ; ಈ ಪ್ರಹಸನ ನಡೆಯುತ್ತಿರುವಂತೆಯೆ ದಿಲ್ಲಿಗರು ಈ ಒಟ್ಟು ಪರಿಸ್ಥಿತಿಗೆ ಬಲಿಪಶುಗಳಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next