Advertisement
ಸೋಮವಾರದ ಪಂದ್ಯದಲ್ಲಿ ಚೆನ್ನೈ ವಿರುದ್ಧ ಹೋರಾಡಿ ಸೋತಿದ್ದ ಡೆಲ್ಲಿ ತಂಡ ಬುಧವಾರದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ರಾಜಸ್ಥಾನ ಕೂಡ ಈ ಕೂಟದಲ್ಲಿ ಸಾಧಾರಣ ನಿರ್ವಹಣೆ ನೀಡಿದೆ. ಹಾಗಾಗಿ ಉಭಯ ತಂಡಗಳು ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಿ ಸುವ ಸಾಧ್ಯತೆಯಿದೆ. ಚೆನ್ನೈ ವಿರುದ್ಧ ಡೆಲ್ಲಿಯ ವೀರಾವೇಶದ ಆಟ ಗಮನಿಸಿದರೆ ಜಯಭೇರಿ ಹೊಡೆದರೂ ಸಂಶಯವಿಲ್ಲ.
ಇಷ್ಟರವರೆಗಿನ ಪಂದ್ಯಗಳಲ್ಲಿ ಅಯ್ಯರ್ ಮತ್ತು ರಿಷಬ್ ಮಿಂಚಿದ್ದಾರೆ. ಅವರಿಬ್ಬರು ಅನುಕ್ರಮವಾಗಿ 306 ಮತ್ತು 257 ರನ್ ಪೇರಿಸಿ ತಂಡದ ಉತ್ತಮ ಮೊತ್ತಕ್ಕೆ ಕಾರಣರಾಗಿದ್ದಾರೆ. ಅವರಿಬ್ಬರು ಬುಧವಾರದ ಪಂದ್ಯದಲ್ಲೂ ಮಿಂಚಿದರೆ ಡೆಲ್ಲಿ ಗೆಲುವಿಗೆ ಪ್ರಯತ್ನಿಸಬಹುದು. ಡೆಲ್ಲಿಯ ಬೌಲಿಂಗ್ ಉತ್ತಮ ಮಟ್ಟದಲ್ಲಿದೆ. ಟ್ರೆಂಟ್ ಬೌಲ್ಟ್ 11 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. ಆದರೆ ಅವರಿಗೆ ಉಳಿದವರು ಉತ್ತಮ ಸಹಕಾರ ನೀಡುತ್ತಿಲ್ಲ.
Related Articles
ಆಡಿದ ಏಳು ಪಂದ್ಯಗಳಲ್ಲಿ ಮೂರರಲ್ಲಿ ಜಯ ಸಾಧಿಸಿರುವ ರಾಜಸ್ಥಾನ ರಾಯಲ್ಸ್ ಆರಂಕದೊಂದಿಗೆ ಐದನೇ ಸ್ಥಾನದಲ್ಲಿದೆ. ಅಜಿಂಕ್ಯ ರಹಾನೆ ನೇತೃತ್ವದ ತಂಡ ಸ್ಥಿರವಾದ ನಿರ್ವಹಣೆ ನೀಡುತ್ತಿಲ್ಲ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗೆಲ್ಲಲು 151 ರನ್ ಸವಾಲಿದ್ದರೂ ರಾಜಸ್ಥಾನ 11 ರನ್ನಿನಿಂದ ಸೋತು ಆಘಾತಕ್ಕೆ ಒಳಗಾಗಿತ್ತು. ಈ ಪಂದ್ಯದಲ್ಲಿ ರಹಾನೆ 65 ಮತ್ತು ಸ್ಯಾಮ್ಸನ್ 40 ರನ್ ಗಳಿಸಿದ್ದರೂ ಉಳಿದ ಆಟಗಾರರು ಉತ್ತಮ ಬೆಃಬಲ ನೀಡಲಿಲ್ಲ. ಈ ಋತುವಿನಲ್ಲಿ ರಹಾನೆ ಮತ್ತು ಸ್ಯಾಮ್ಸನ್ ಮಾತ್ರ ಉತ್ತಮ ನಿರ್ವಹಣೆ ನೀಡಿದ್ದಾರೆ. ಉಳಿದಂತೆ ಬೆನ್ ಸ್ಟೋಕ್ಸ್, ಬಟ್ಲರ್ ಅವರ ಅಸ್ಥಿರ ನಿರ್ವಹಣೆ ಮುಂದುವರಿದಿದೆ. ಬೌಲಿಂಗ್ದಲ್ಲಿ ಜೋಫ್ರಾ ಆರ್ಚರ್ ಅವರನ್ನು ಬಿಟ್ಟರೆ ಉಳಿದ ಬೌಲರ್ಗಳು ವಿಫಲರಾಗಿದ್ದಾರೆ.
Advertisement
ತಂಡವಾಗಿ ಉತ್ತಮ ನಿರ್ವಹಣೆನಾವು ತಂಡವಾಗಿ ಉತ್ತಮ ನಿರ್ವಹಣೆ ನೀಡುತ್ತಿದ್ದೇವೆ. ಆದರೆ ಚಿಕ್ಕಪುಟ್ಟ ವಿಷಯದಿಂದಾಗಿ ನಾವು ಪಂದ್ಯವನ್ನು ಕಳೆದು ಕೊಳ್ಳುತ್ತಿದ್ದೇವೆ ಎಂದು ವಿಜಯ ಶಂಕರ್ ಹೇಳಿದರು. ನಾವು ಚೆನ್ನೈಯಂತಹ ಬಲಿಷ್ಠ ತಂಡದೆದುರು 6 ಓವರ್ಗಳಲ್ಲಿ 80 ರನ್ ಗಳಿಸುವ ಸಾಹಸಕ್ಕೆ ಪ್ರಯತ್ನಿಸಿದೆವು ಮತ್ತು ಸನಿಹದವರೆಗೆ ಬಂದು 13 ರನ್ನಿನಿಂದ ಸೋತೆವು. ನಾವು ಗೆಲುವಿಗಾಗಿ ಬಹಳಷ್ಟು ಪ್ರಯತ್ನ ಪಟ್ಟೆವು. ಮುಂದಿನ ಪಂದ್ಯಗಳಲ್ಲಿ ಒಳ್ಳೆಯ ತಂಡವಾಗಿ ಉತ್ತಮ ಹೋರಾಟ ನೀಡಲು ಪ್ರಯತ್ನಿಸಲಿದ್ದೇವೆ ಎಂದವರು ತಿಳಿಸಿದರು.