Advertisement

MJ ಅಕ್‌ಬರ್‌ ಮಾನಹಾನಿ ಕೇಸ್‌:ಫೆ.25ರಂದು ಹಾಜರಾಗಲು ರಮಣಿಗೆ ಸಮನ್ಸ್‌

11:01 AM Jan 29, 2019 | udayavani editorial |

ಹೊಸದಿಲ್ಲಿ : ಲೈಂಗಿಕ ದುರ್ವರ್ತನೆ ಆರೋಪ ಹೊರಿಸಿದ್ದ ಕಾರಣಕ್ಕೆ ಮಾಜಿ ಕೇಂದ್ರ ಸಚಿವ ಎಂ ಜೆ ಅಕ್‌ಬರ್‌ ಅವರಿಂದ ದಾಖಲಿಸಲ್ಪಟ್ಟಿದ್ದ  ಮಾನ ಹಾನಿ ದಾವೆಗೆ ಸಂಬಂಧಿಸಿ ದಿಲ್ಲಿ ಕೋರ್ಟ್‌ ಇಂದು ಮಂಗಳವಾರ ಪತ್ರಕರ್ತೆ ಪ್ರಿಯಾ ರಮಣಿ ಅವರಿಗೆ ಫೆ.25ರಂದು ತನ್ನ ಮುಂದೆ ಹಾಜರಾಗುವಂತೆ ಸಮನ್ಸ್‌ ಹೊರಡಿಸಿದೆ.

Advertisement

ದೂರುದಾರ ಅಕ್‌ಬರ್‌ ಅವರ ಮನವಿಯ ಪ್ರಕಾರ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌  ಸಮರ್‌ ವಿಶಾಲ್‌ ಅವರು ಸಮನ್ಸ್‌ ಹೊರಡಿಸಿದರು. 

ಮಾಜಿ ಕೇಂದ್ರ ಸಚಿವ ಎಂ ಜೆ ಅಕ್‌ಬರ್‌ ಅವರು ಮೀ ಟೂ ಅಭಿಯಾನದ ಅಂಗವಾಗಿ ತನ್ನ ಹೆಸರು ಸಾಮಾಜಿಕ ಮಾಧ್ಯದಲ್ಲಿ  ಕಾಣಿಸಿಕೊಂಡದ್ದನ್ನು ಅನುಸರಿಸಿ ಪ್ರಿಯಾ ರಮಣಿ ವಿರುದ್ದದ ಕಳೆದ ವರ್ಷ ಅಕ್ಟೋಬರ್‌ 17ರಂದು ಖಾಸಗಿ ಮಾನಹಾನಿ ದಾವೆಯನ್ನು ದಾಖಲಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next