Advertisement

ದಿಲ್ಲಿ ಸಿಎಸ್‌ ಮೇಲೆ ಹಲ್ಲೆ ಪ್ರಕರಣ: ಕೇಜ್ರಿ, ಸಿಸೋಡಿಯಾಗೆ ಜಾಮೀನು

12:15 PM Oct 25, 2018 | Team Udayavani |

ಹೊಸದಿಲ್ಲಿ : ದಿಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್‌ ಅವರ ಮೇಲೆ ಸಿಎಂ ನಿವಾಸದಲ್ಲೇ ಶಾಸಕರಿಂದ ನಡೆಯಿತೆನ್ನಲಾದ ಹಲ್ಲೆಯ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮತ್ತು ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರಿಗೆ ದಿಲ್ಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

Advertisement

ಅಂಶು ಪ್ರಕಾಶ್‌ ಮೇಲಿನ ಹಲ್ಲೆ ಪ್ರಕರಣದಲ್ಲಿ ಸಿಎಂ ಕೇಜ್ರಿವಾಲ್‌ ನಿವಾಸದಲ್ಲಿ ಈ ವರ್ಷ ಫೆ.19ರಂದು ನಡೆದಿತ್ತು. ಈ ಪ್ರಕರಣದ ಎಲ್ಲ ಆರೋಪಿಗಳಿಗೆ  (ಅಮಾನತುಲ್ಲ ಖಾನ್‌ ಮತ್ತು ಪ್ರಕಾಶ್‌ ಜರವಾಲ್‌ ಅವರನ್ನು ಹೊರತು ಪಡಿಸಿ) ನ್ಯಾಯಾಲಯ ತಲಾ 50,000 ರೂ. ವೈಯಕ್ತಿಕ ಭದ್ರತೆಯ ಆಧಾರದಲ್ಲಿ ಜಾಮೀನು ಮಂಜೂರು ಮಾಡಿತು. 

ಖಾನ್‌ ಮತ್ತು ಜರವಾಲ್‌ ಅವರಿಗೆ ದಿಲ್ಲಿ ನ್ಯಾಯಾಲಯ ಈ ಹಿಂದೆಯೇ ಜಾಮೀನು ಮಂಜೂರು ಮಾಡಿತ್ತು. ಈ ಪ್ರಕರಣವನ್ನು ನ್ಯಾಯಾಲಯ ಈಗಿನ್ನು ಡಿ.7ಕ್ಕೆ ವಿಚಾರಣೆಗೆ ನಿಗದಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next