Advertisement

ಅಮಾಯಕರಿಗೆ 1.20 ಕೋಟಿ ರೂ. ವಂಚಿಸಿದ ದಿಲ್ಲಿ ಬಿಲ್ಡರ್‌ ಅರೆಸ್ಟ್‌

09:05 AM Apr 04, 2019 | Sathish malya |

ಹೊಸದಿಲ್ಲಿ : ದಕ್ಷಿಣ ದಿಲ್ಲಿಯ ಫ‌ತೇಪುರ್‌ ಬೆರಿಯಲ್ಲಿ ಮಾರಾಟವಾದ ಫ್ಲ್ಯಾಟುಗಳನ್ನು ಅಮಾಯಕರಿಗೆ ಮಾರುವ ಮೂಲಕ 1.20 ಕೋಟಿ ರೂ. ವಂಚಿಸಿದ 37ರ ಹರೆಯದ ಬಿಲ್ಡರ್‌ ನನ್ನು ಬಂಧಿಸಿರುವುದಾಗಿ ದಿಲ್ಲಿ ಪೊಲೀಸರು ಇಂದು ಬುಧವಾರ ತಿಳಿಸಿದ್ದಾರೆ.

Advertisement

ಜನರಿಗೆ ವಂಚನೆ ಗೈದಿರುವ ಆರೋಪಿ ಬಿಲ್ಡರ್‌ನನ್ನು ಯೋಗೇಶ್‌ ಕುಮಾರ್‌ ಭಾಟಿ ಎಂದು ಗುರುತಿಸಲಾಗಿದ್ದು ಈತನು ಸುಲ್ತಾನ್‌ಪುರ ಗ್ರಾಮದ ನಿವಾಸಿ ಎಂದು ಗೊತ್ತಾಗಿದೆ.

ಭಾಟಿ ಅಮಾಯಕ ಖರೀದಿದಾರರಿಂದ ತಲಾ 30 ಲಕ್ಷ ರೂ. ಪಡೆದು ಮಾರಾಟವಾಗಿದ್ದ ಫ್ಲ್ಯಾಟುಗಳನ್ನು ಸೇಲ್‌ ಡೀಡ್‌ ಮೂಲಕ ಮಾರಿ 1.2 ಕೋಟಿ ರೂ. ವಂಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next