Advertisement

ನೀರು ಹರಿಸಲು ವಿಳಂಬ: ರೈತರ ಪ್ರತಿಭಟನೆ

07:38 AM Jun 28, 2019 | Team Udayavani |

ಚಾಮರಾಜನಗರ: ಹುತ್ತೂರು ಕೆರೆಯಿಂದ ತಾಲೂಕಿನ ಸುವರ್ಣನಗರ ಕೆರೆ ಹಾಗೂ ಅರಕಲವಾಡಿ ಕೆರೆಗಳಿಗೆ ಪೈಪ್‌ ಲೈನ್‌ ಮೂಲಕ ನೀರು ಹರಿಸಲು ಜಿಲ್ಲಾಡಳಿತ ಹಾಗೂ ಕಾವೇರಿ ನೀರಾವರಿ ನಿಗಮ ವಿಳಂಬ ಮಾಡುತ್ತಿವೆ ಎಂದು ಆರೋಪಿಸಿ ಆ ಭಾಗದ ರೈತರು ಅರಕಲವಾಡಿ ಕೆರೆ ಅಂಗಳದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದಾರೆ.

Advertisement

ಈ ವೇಳೆ ಮಾತನಾಡಿದ ರೈತ ಮುಖಂ ಡರು, ನಾಲ್ಕನೇ ಹಂತದ ಏತ ನೀರಾವರಿ ಯೋಜನೆಯಡಿಯಲ್ಲಿ ಹನ್ನೊಂದು ಕೆರೆಗಳಿಗೆ ನೀರು ಹರಿಸಲು ಕ್ರಿಯಾ ಯೋಜನೆ ರೂಪಿಸಿದ್ದು, ಅದರಂತೆ ಯೋಜನೆಯ ವ್ಯಾಪ್ತಿಯ ಎಲ್ಲಾ ಕೆರೆ ಗಳಿಗೆ ನೀರು ಹರಿಸಲು ಸರಿಯಾದ ಕ್ರಮ ಕೈಗೊಂಡಿಲ್ಲ. ಜಿಲ್ಲಾಡಳಿತ ಸರಿಯಾದ ಕ್ರಮ ಕೈಗೊಂಡಿದ್ದರೆ ಇಷ್ಟೊತ್ತಿಗೆ ಯೋಜನೆ ಎಲ್ಲಾ ಕೆರೆಗಳಿಗೂ ನೀರು ಬಿಡಬಹು ದಾಗಿತ್ತು ಎಂದರು.

ರೈತರಿಗೆ ವಂಚನೆ: ಕಳೆದ 12 ವರ್ಷಗಳಿಂದ ಈ ಭಾಗದಲ್ಲಿ ಮಳೆ ಇಲ್ಲದೇ ಬರದಿಂದ ತತ್ತರಿಸಿದ್ದೇವೆ. ಕುಡಿ ಯುವ ನೀರಿಲ್ಲದೇ ಜನ ಜಾನುವಾರಿಗೆ ತೊಂದರೆಯಾಗಿದೆ. ಹುತ್ತೂರು ಕೆರೆ ಅಂಗಳದಿಂದ ನೀರು ಹರಿಸುವ ಯೋಜನೆಯನ್ನು ಗುಂಡ್ಲುಪೇಟೆ ಕ್ಷೇತ್ರದ ಶಾಸಕರು ಮುತುರ್ವಜಿ ವಹಿಸಿ ಬೇಗ ಕಾಮಗಾರಿಯನ್ನು ಪೂರ್ಣ ಮಾಡಿಕೊಂಡರು. ಆದರೆ ಚಾಮರಾಜ ನಗರ ಕ್ಷೇತ್ರದ ಶಾಸಕರೂ ಆದ ಜಿಲ್ಲಾ ಉಸ್ತುವಾರಿ ಸಚಿವರ ವಿಳಂಬ ನೀತಿ ಹಾಗೂ ಕಾಮಗಾರಿಯ ಬಗ್ಗೆ ಅಧಿಕಾರಿ ಗಳಿಂದ ಸರಿಯಾದ ಮಾಹಿತಿ ಪಡೆದು ಕೊಳ್ಳಲು ವಿಫ‌ಲರಾದ ಕಾರಣ ಈ ಭಾಗದ ರೈತರು ಯೋಜನೆಯಿಂದ ವಂಚಿತರಾಗು ವಂತಾಗಿದೆ ಎಂದು ದೂರಿದರು.

ಸ್ಪಷ್ಟ ಭರವಸೆ ನೀಡಲು ಜಿಲ್ಲಾಡಳಿತಕ್ಕೆ ರೈತರ ಆಗ್ರಹ: ಕುಡಿಯುವ ನೀರಿನ ವಿಚಾರದಲ್ಲಿ ಯಾವುದೇ ರೀತಿ ರಾಜಕೀಯ ಇಲ್ಲ. ಎಲ್ಲರು ಸಹ ರೈತರಾಗಿದ್ದು, ಜಿಲ್ಲಾಡಳಿತ ಕೂಡಲೇ ನಮ್ಮ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು. ಸೂಕ್ತ ಭರವಸೆ ನೀಡುವವರೆಗೆ ನಾವು ಸ್ಥಳ ಬಿಟ್ಟು ಕದಡುವುದಿಲ್ಲ. ಧರಣಿಯನ್ನು ಮುಂದು ವರಿಸಲು ಸಿದ್ದ ಎಂದು ಸ್ಥಳಕ್ಕಾಗಮಿಸಿದ್ದ ನೀರಾವರಿ ನಿಗಮದ ಅಧಿಕಾರಿಗೆ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳು ಸ್ಥಳಕ್ಕಾ ಗಮಿಸಿ, ಶೀಘ್ರ ಪೈಪ್‌ಲೈನ್‌ ಕಾಮಗಾರಿ ಯನ್ನು ಪೂರ್ಣ ಮಾಡಿ, ಕೆರೆಗೆ ನೀರು ಹರಿಸುವ ಸ್ಪಷ್ಟ ಭರವಸೆಯನ್ನು ನೀಡಬೇಕು ಎಂದು ಆಗ್ರಹಿಸಿದರು.

Advertisement

ಪ್ರತಿಭಟನೆಯಲ್ಲಿ ಮುಖಂಡರಾದ ನಿಜಗುಣರಾಜು, ನಾಗಶ್ರೀಪ್ರತಾಪ್‌, ಜಿ.ಪಂ. ಮಾಜಿ ಅಧ್ಯಕ್ಷ ಎಂ ರಾಮಚಂದ್ರ, ಯಣಗುಂಬ ಪುಟ್ಟಸ್ವಾಮಿ, ಲಿಂಗಪ್ಪ, ಯರಗನಹಳ್ಳಿ ಶಿವಕುಮಾರ್‌, ಮಹೇಶ್‌ ಸೇರಿದಂತೆ ರೈತರು ಭಾಗವಹಿಸಿದ್ದರು.

ಬಿಜೆಪಿ ಜಿಲ್ಲಾಧ್ಯಕ್ಷ ಧರಣಿಯಲ್ಲಿ ಭಾಗಿ:

ತಾಲೂಕಿನ ಅರಕಲವಾಡಿ ಕೆರೆ, ಸುವರ್ಣನಗರ ಕೆರೆಗಳಿಗೆ ಶೀಘ್ರ ಪೈಪ್‌ ಲೈನ್‌ ಅಳವಡಿಸಿ, ಹುತ್ತೂರು ಕೆರೆಯಿಂದ ನೀರು ಹರಿಸಬೇಕೆಂದು ಆಗ್ರಹಿಸಿ ರೈತರು ಆರಂಭಿಸಿರುವ ಚಳವಳಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಪ್ರೊ. ಕೆ.ಆರ್‌. ಮಲ್ಲಿಕಾರ್ಜುನಪ್ಪ ಧರಣಿಯಲ್ಲಿ ಭಾಗವಹಿಸುವ ಮೂಲಕ ಬೆಂಬಲ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟರ ವೈಫ‌ಲ್ಯ ಇಲ್ಲಿ ಎದ್ದು ಕಾಣುತ್ತಿದೆ. ಕಳೆದ 4 ತಿಂಗಳ ಹಿಂದೆಯೇ ಪೈಪ್‌ ಲೈನ್‌ ಕಾಮಗಾರಿ ಪೂರ್ಣ ಗೊಳ್ಳಬೇಕಾಗಿತ್ತು. ಜೂನ್‌ ಪೂರ್ಣವಾಗುತ್ತಿದ್ದರೂ ಪೈಪ್‌ಲೈನ್‌ ಕಾಮಗಾರಿ ಆರಂಭವಾಗಿಲ್ಲ. ಇನ್ನು ಈ ಕೆರೆಗಳಿಗೆ ನೀರು ಹರಿಸುವುದು ಯಾವಾಗ ಎಂದು ಪ್ರಶ್ನೆ ಮಾಡಿದರು. ಪುಟ್ಟರಂಗಶೆಟ್ಟರು ಯೋಜನೆಯನ್ನು ಜಾರಿ ಮಾಡಲು ವಿಫ‌ಲರಾಗಿರುವುದು ಬಹಿರಂಗವಾದ ಸತ್ಯವಾಗಿದೆ. ಇನ್ನಾದರೂ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಈ ಭಾಗದ ರೈತರು ಹಾಗು ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕೆರೆಯನ್ನು ತುಂಬಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next