Advertisement

Pralhad Joshi ಕೇಂದ್ರದ ಸಲಹೆ ಧಿಕ್ಕರಿಸಿ ಟಿಬಿ ಡ್ಯಾಂ ಕ್ರೆಸ್ಟ್‌ಗೇಟ್‌ ಹಾನಿ

01:41 AM Aug 14, 2024 | Team Udayavani |

ಹುಬ್ಬಳ್ಳಿ: ಜಲಾಶಯಗಳ ಸಮರ್ಪಕ ನಿರ್ವಹಣೆಗೆ ಕೇಂದ್ರ ಸಮಿತಿ ನೀಡಿದ ಸಲಹೆಗಳನ್ನು ರಾಜ್ಯ ಸರಕಾರ ಧಿಕ್ಕರಿಸಿದೆ. ಇದರ ಪರಿಣಾಮವಾಗಿಯೇ ತುಂಗಭದ್ರಾ ಜಲಾಶಯದ 19ನೇ ಕ್ರೆಸ್ಟ್‌ ಗೇಟ್‌ ಮುರಿದು ಬಿದ್ದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿ, ತುಂಗ ಭದ್ರಾ ಜಲಾಶಯ ಬೇಸಗೆಯಲ್ಲಿ ಖಾಲಿ ಇತ್ತು. ರಾಜ್ಯ ಸರಕಾರ ಆಗಲೇ ಸಮರ್ಪಕ ನಿರ್ವಹಣೆ ಕೈಗೊಳ್ಳಬೇಕಿತ್ತು. ಕೇಂದ್ರ ಸರಕಾರ ನೀಡಿದ ಸಲಹೆಗಳನ್ನೂ ಪಾಲಿಸದೆ ಧಿಕ್ಕರಿಸಿತು. ಆಗ ತೋರಿದ ಔದಾಸೀನ್ಯದ ಪರಿಣಾಮ ಈಗ ಎದುರಿಸುವಂತಾಗಿದೆ ಎಂದರು.

ರಾಜ್ಯ ಸರಕಾರದ ಬಳಿ ರಸ್ತೆ ದುರಸ್ತಿಗೂ ಹಣವಿಲ್ಲ. ಇನ್ನು ಸಮಾನಾಂತರ ಜಲಾಶಯ ಹೇಗೆ ನಿರ್ಮಾಣ ಮಾಡುತ್ತಾರೆ? ಬೇಕಾಬಿಟ್ಟಿ ಆಡಳಿತ, ಭ್ರಷ್ಟಾಚಾರದ ಫಲವಾಗಿ ರಾಜ್ಯ ಸರಕಾರ ದಿವಾಳಿಯಾಗಿದೆ. ಹಿಂದೆ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದಾಗ ಜಲಾ ಶಯಗಳ ನಿರ್ವಹಣೆಗೆ ಪ್ರತೀ ವರ್ಷ 10 ಸಾವಿರ ಕೋಟಿ ರೂ. ವೆಚ್ಚ ಮಾಡುವುದಾಗಿ ಹೇಳಿದ್ದರು. ಆದರೆ ತಮ್ಮ ಆಡಳಿತವಿದ್ದ 5 ವರ್ಷಗಳಲ್ಲೂ 10 ಸಾವಿರ ಕೋಟಿ ರೂ. ಖರ್ಚು ಮಾಡಲಿಲ್ಲ. ರಾಜ್ಯ ಸರಕಾರ ಇನ್ನಾದರೂ ರಾಜ್ಯದ ಎಲ್ಲ ಜಲಾಶಯಗಳ ನಿರ್ವಹಣೆಗೆ ಗಮನ ಹರಿಸಬೇಕು ಎಂದು ಕೇಂದ್ರ ಸಚಿವ ಜೋಶಿ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next