Advertisement

ತಮಿಳು​​​​​​​ನಾಡಿನಲ್ಲಿ ರಕ್ಷಣಾ ಕಾರಿಡಾರ್‌ 

01:25 AM Jan 21, 2019 | Team Udayavani |

ಚೆನ್ನೈ: ಮೇಕ್‌ ಇನ್‌ ಇಂಡಿಯಾಗೆ ಪೂರಕ ವಾಗಿ ಶಸ್ತ್ರಾಸ್ತ್ರಗಳನ್ನು ನಿರ್ಮಿಸಲು ರಕ್ಷಣಾ ಔದ್ಯಮಿಕ ಕಾರಿಡಾರ್‌ ಅನ್ನು ತಮಿಳು ನಾಡಿನಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಉದ್ಘಾಟಿಸಿದ್ದಾರೆ. 

Advertisement

ಚೆನ್ನೈ, ಹೊಸೂರು, ಸೇಲಂ, ಕೊಯಮತ್ತೂರು ಮತ್ತು ತಿರುಚಿರಾಪಳ್ಳಿಯನ್ನು ಈ ಕಾರಿಡಾರ್‌ ಸಂಪರ್ಕಿಸಲಿದೆ. ಈ ನಗರಗಳಲ್ಲಿ ರಕ್ಷಣಾ ವಲಯಕ್ಕೆ ಸಂಬಂಧಿಸಿದ ಹಲವು ಉದ್ದಿಮೆ ಗಳಿವೆ. ಉದ್ದಿಮೆಗಳಿಗೆ ಕಚ್ಚಾ ಸಾಮಗ್ರಿ ಒದಗಿಸುವ ಹಲವು ವೆಂಡರ್‌ಗಳೂ ಇದ್ದಾರೆ. ಇವುಗಳ ಮಧ್ಯೆ ಉತ್ತಮ ಸಂಪರ್ಕ ಸಾಧಿ ಸುವ ನಿಟ್ಟಿನಲ್ಲಿ ಕಾರಿಡಾರ್‌ ನಿರ್ಮಿಸಲಾಗಿದೆ ಕಾರಿಡಾರ್‌ಗೆ ರಕ್ಷಣಾ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನು ಪಾಲಕ್ಕಾಡ್‌ವರೆಗೂ ವಿಸ್ತರಿಸಲು ಕೋರಿದ್ದಾರೆ. ಆದರೆ ಸದ್ಯಕ್ಕೆ ನಾವು 5 ನಗರಗಳಿಗೆ ಮಾತ್ರ ಮಿತಿಗೊ ಳಿಸಿದ್ದೇವೆ ಎಂದು ಸಚಿವೆ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next