Advertisement

ಸಚಿವ ಸಾ.ರಾ.ಮಹೇಶ್‌ ವಿರುದ್ಧ ಗರಂ ಆದ ನಿರ್ಮಲಾ ಸೀತಾರಾಮನ್‌ !

01:54 PM Aug 24, 2018 | |

ಮಡಿಕೇರಿ: ಪ್ರವಾಹದಿಂದ ಕಂಗೆಟ್ಟಿದ್ದ ಕೊಡಗು ಜಿಲ್ಲೆಗೆ ಶುಕ್ರವಾರ ಆಗಮಿಸಿದ್ದ ಕೇಂದ್ರ ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್‌ ಅವರು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌ ವಿರುದ್ಧ  ಗರಂ ಆದ ಪ್ರಸಂಗ ನಡೆದಿದೆ. 

Advertisement

ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಹಾನಿಗೀಡಾದ ಸ್ಥಳ ವೀಕ್ಷಣೆಗೆ ವೇಳಾ ಪಟ್ಟಿ ಸಿದ್ದಪಡಿಸಲಾಗಿತ್ತು. ಆದರೆ  ಸಚಿವ ಸಾ.ರಾ.ಮಹೇಶ್‌ ಅವರು ಕುಶಾಲನಗರದ ಬದಲು ಮಾದಾಪುರಕ್ಕೆ ಕರೆದೊಯ್ದಿದ್ದಾರೆ. 

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹತ್ವದ ಸಭೆಯಲ್ಲಿ ಈ ವಿಚಾರ ಅರಿವಿಗೆ ಬಂದೊಡನೆ ಸಚಿವೆ , ಸಾ.ರಾ.ಮಹೇಶ್‌ ವಿರುದ್ದ ಕಿಡಿ ಕಾರಿದ್ದಾರೆ. ನಾನು ಕೇಂದ್ರ ಸಚಿವೆ ನೀವು ಹೇಳಿದ್ದಲ್ಲಿ ಹೋಗಬೇಕಾ ಎಂದು ಪ್ರಶ್ನಿಸಿದ್ದಾರೆ.

ಜಿಲ್ಲಾಧಿಕಾರಿ ಶ್ರಿ ವಿದ್ಯಾ ಬಳಿ ‘ನೀವೆ ನಿಗದಿ ಮಾಡಿದ ಸ್ಥಳಗಳಿಗೆ ಹೋಗುತ್ತಿದ್ದೇನೆ. ನಿಮ್ಮಲ್ಲಿನ ಗೊಂದಲಗಳನ್ನು ಬಗೆ ಹರಿಸಿಕೊಳ್ಳಿ.ಯಾಕೆ ಹೀಗಾಯಿತು’ ಎಂದು ಪ್ರಶ್ನಿಸಿದ್ದಾರೆ.

ಸಚಿವೆ ಗರಂ ಆಗುತ್ತಿದ್ದಂತೆ ಸಾ.ರಾ.ಮಹೇಶ್‌ ಅವರು ಮೌನಕ್ಕೆ ಶರಣಾಗಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next