Advertisement

Defamation:50 ಲಕ್ಷ ನೀಡಲು ಟಿಎಂಸಿ ಸಂಸದ ಗೋಖಲೆ ಗೆ ಆದೇಶ

02:05 AM Jul 02, 2024 | Team Udayavani |

ಹೊಸದಿಲ್ಲಿ: ಟಿಎಂಸಿ ನಾಯಕ, ರಾಜ್ಯಸಭಾ ಸಂಸದ ಸಾಕೇತ್‌ ಗೋಖಲೆ ಅವರ ವಿರುದ್ಧ ಮಾಜಿ ರಾಜತಾಂತ್ರಿಕ ಅಧಿಕಾರಿ ಲಕ್ಷ್ಮೀ ಪುರಿ ದಾಖಲಿಸಿದ್ದ ಮಾನಹಾನಿ ಪ್ರಕರಣದ ನಷ್ಟ ಪರಿಹಾರವಾಗಿ ಸಾಕೇತ್‌ ಅವರು 50 ಲಕ್ಷ ರೂ. ನೀಡಬೇಕೆಂದು ದಿಲ್ಲಿ ಹೈಕೋರ್ಟ್‌ ನಿರ್ದೇಶಿಸಿದೆ.

Advertisement

ತಿಂಗಳ ಒಳಗಾಗಿ ಸಾಕೇತ್‌ ಅವರು ಲಕ್ಷ್ಮೀ ಪುರಿಯ ಕ್ಷಮೆಯನ್ನೂ ಕೇಳಬೇಕು. ಸಾರ್ವಜನಿಕ ಕ್ಷಮಾಪಣೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಿಸಬೇಕು ಎಂದೂ ಸೂಚಿಸಿದೆ. 2021ರಲ್ಲಿ ಸಾಕೇತ್‌ ಅವರು ಕೇಂದ್ರ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಅವರ ಪತ್ನಿ ಲಕ್ಷ್ಮೀ ಪುರಿ ವಿರುದ್ಧ ಆದಾಯಕ್ಕೂ ಮೀರಿದ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next