Advertisement

ನಾಡಿನೆಲ್ಲೆಡೆ ಸಂಭ್ರಮದ ಗೋಪೂಜೆ

11:42 AM Nov 09, 2018 | |

ಉಡುಪಿ: ಬಲಿಪಾಡ್ಯದ ದಿನವಾದ ಗುರುವಾರ ನಾಡಿನ ವಿವಿಧೆಡೆ ಗೋಪೂಜೆಯನ್ನು ನಡೆಸಲಾಯಿತು. ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಪಲಿಮಾರು ಮತ್ತು ಶ್ರೀ ಅದಮಾರು ಕಿರಿಯ ಮಠಾಧೀಶರು ಕನಕ ಗೋಪುರದ ಎದುರು ಪೂಜೆ ಸಲ್ಲಿಸಿ ದನಗಳಿಗೆ ತಿನಿಸುಗಳನ್ನು ನೀಡಿದರು.
 

Advertisement

ಬಳಿಕ ರಥಬೀದಿಯಲ್ಲಿ ದನಗಳ ಮೆರವಣಿಗೆ ನಡೆಯಿತು.ಗೋಪೂಜೆ ನಿಮಿತ್ತ ದೇಸೀ ಹಸುಗಳಿಂದ ತಯಾರಿಸಿದ ಪಂಚಗವ್ಯವನ್ನು ಭಕ್ತರಿಗೆ ವಿತರಿಸಲಾಯಿತು. ವಿವಿಧ ಮಠಗಳು, ದೇವಸ್ಥಾನಗಳಲ್ಲಿ, ಮನೆಗಳಲ್ಲಿಯೂ ಗೋಪೂಜೆ ನಡೆಸಲಾಯಿತು. ಈ ಸಂದರ್ಭ ದನಗಳಿಗೆ ವಿಶಿಷವಾದ ಅಲಂಕಾರಗಳನ್ನು ಮಾಡಲಾಯಿತು. ಜನರಿಗೆ ಅನುಕೂಲವಾಗಲು ಕೆಲವು ಗೋಶಾಲೆಗಳಲ್ಲಿ ಬೇರೆ ದಿನಗಳಲ್ಲಿಯೂ ಗೋಪೂಜೆಯನ್ನು ಆಯೋಜಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next