Advertisement

Deepak Rao,ಪ್ರಶಾಂತ್‌ ಪೂಜಾರಿ ಹತ್ಯೆ ಪ್ರಕರಣ: ವಿಶೇಷ ಕೋರ್ಟ್‌ ಸ್ಥಾಪಿಸಲು ಮನವಿ

11:40 PM Dec 26, 2023 | Team Udayavani |

ಮಂಗಳೂರು: ಹಿಂದೂ ಕಾರ್ಯಕರ್ತರಾದ ದೀಪಕ್‌ ರಾವ್‌ ಮತ್ತು ಪ್ರಶಾಂತ್‌ ಪೂಜಾರಿ ಅವರ ಹತ್ಯೆ ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು ಎಂದು ದೀಪಕ್‌ ರಾವ್‌ ಅವರ ತಾಯಿ ಪ್ರೇಮಾ ರಾವ್‌ ಮತ್ತು ಪ್ರಶಾಂತ್‌ ಪೂಜಾರಿ ಅವರ ತಾಯಿ ಯಶೋದಾ ಪೂಜಾರ್ತಿ ಅವರು ದ.ಕ. ಜಿಲ್ಲಾಧಿಕಾರಿಯವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದ್ದಾರೆ.

Advertisement

ಮೂಡುಬಿದಿರೆಯ ಪ್ರಶಾಂತ್‌ ಪೂಜಾರಿ ಅವರನ್ನು 2015ರಲ್ಲಿ ಹಾಗೂ ಸುರತ್ಕಲ್‌ ಕೃಷ್ಣಾಪುರದ ದೀಪಕ್‌ ರಾವ್‌ ಅವರನ್ನು 2019ರಲ್ಲಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಗಳ ಅಪರಾಧಿಗಳಿಗೆ ಇನ್ನು ಕೂಡ ಶಿಕ್ಷೆಯಾಗಿಲ್ಲ. ತನಿಖೆ ಶೀಘ್ರಗತಿಯಲ್ಲಿ ನಡೆಯುತ್ತಿಲ್ಲ. ಗೌರಿಲಂಕೇಶ್‌ ಮತ್ತು ಎಂ.ಎಂ. ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆಗೆ ವಿಶೇಷ ನ್ಯಾಯಾಲಯ ಸ್ಥಾಪನೆಯ ಮಾದರಿಯಲ್ಲೇ ಪ್ರಶಾಂತ್‌ ಪೂಜಾರಿ ಮತ್ತು ದೀಪಕ್‌ ರಾವ್‌ ಪ್ರಕರಣದ ತನಿಖೆಗೂ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು ಎಂದವರು ಮನವಿಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next