Advertisement

ದೇಶದಲ್ಲಿ ತಲಾ ನೀರು ಲಭ್ಯತೆ ಕುಸಿತ

12:42 AM Jul 16, 2019 | Sriram |

ಹೊಸದಿಲ್ಲಿ: ದೇಶದಲ್ಲಿ ತಲಾ ನೀರು ಲಭ್ಯತೆಯು 2001ರಲ್ಲಿ 1816 ಕ್ಯೂಬಿಕ್‌ ಮೀಟರಿನಿಂದ 2011ರಲ್ಲಿ 1544 ಕ್ಯೂಬಿಕ್‌ ಮೀಟರಿಗೆ ಕುಸಿದಿದೆ ಎಂದು ರಾಜ್ಯಸಭೆಗೆ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ತಿಳಿಸಿದ್ದಾರೆ. ದೇಶದಲ್ಲಿ ನೀರಿನ ಕೊರತೆ ನಿವಾರಿಸಲು ಮಳೆ ನೀರನ್ನು ಸಂಗ್ರಹಿಸುವ ಅಗತ್ಯವಿದೆ ಎಂದೂ ಅವರು ಹೇಳಿದ್ದಾರೆ.

Advertisement

ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ನೀರು ಸಂರಕ್ಷಣೆಯನ್ನು ಒಂದು ಚಳವಳಿಯನ್ನಾಗಿ ಮಾಡಬೇಕು. ಹಲವು ದೇಶಗಳಲ್ಲಿ ಚರಂಡಿ ನೀರನ್ನೇ ಶುದ್ಧೀಕರಿಸಿ ಕುಡಿಯುವ ನೀರನ್ನಾಗಿ ಪರಿವರ್ತಿಸಲಾಗಿದೆ. ಆದರೆ ಭಾರತಕ್ಕೆ ಆ ಪರಿಸ್ಥಿತಿ ಇನ್ನೂ ಬಂದಿಲ್ಲ ಎಂದಿದ್ದಾರೆ. ನೀರನ್ನು ನಿರ್ವಹಿಸುವುದು ರಾಜ್ಯಗಳ ವ್ಯಾಪ್ತಿಗೆ ಒಳಪಟ್ಟಿದೆ. ಯೋಜನೆ, ನಿರ್ವಹಣೆ ಹಾಗೂ ಜಾರಿಯೆಲ್ಲವೂ ರಾಜ್ಯಕ್ಕೆ ಒಳಪಡುತ್ತವೆ. ಕೇಂದ್ರ ಸರಕಾರವು ಕೇವಲ ತಾಂತ್ರಿಕ, ಹಣಕಾಸು ನೆರವನ್ನು ಈ ಯೋಜನೆ ಗಳಿಗೆ ನೀಡುತ್ತದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next