Advertisement

ವಿಚಾರಣೆಗೆ ಗೈರಾಗಲು ನಿರ್ಧಾರ

12:30 AM Feb 10, 2019 | |

ಹೊಸದಿಲ್ಲಿ: ಸಂಸದೀಯ ಸಮಿತಿ ಮುಂದೆ ಇದೇ ತಿಂಗಳ 11ರಂದು ನಿಗದಿಯಾಗಿರುವ ವಿಚಾರಣೆಗೆ ಹಾಜರಾಗದೇ ಇರಲು ಟ್ವಿಟರ್‌ನ ಮುಖ್ಯ ಆಡಳಿತಾಧಿಕಾರಿ ಹಾಗೂ ಕಂಪನಿಯ ಇನ್ನಿತರ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರ ಹಕ್ಕುಗಳ ರಕ್ಷಣೆ ಕುರಿತಂತೆ ಕೈಗೊಂಡಿರುವ ಕ್ರಮಗಳನ್ನು ತಿಳಿಸುವಂತೆ ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌ ನೇತೃತ್ವದ ಸಮಿತಿಯು ಟ್ವಿಟರ್‌ಗೆ ಸಮನ್ಸ್‌ ನೀಡಿತ್ತು. ಆದರೆ, ಸಮನ್ಸ್‌ಗೆ ಉತ್ತರಿಸಲು ಮತ್ತಷ್ಟು ಕಾಲಾವಕಾಶ ಕೇಳಲು ಟ್ವಿಟರ್‌ ಸಂಸ್ಥೆ ತೀರ್ಮಾನಿಸಿದ್ದು, ಫೆ.11ರ ವಿಚಾರಣೆಯಿಂದ ದೂರ ಉಳಿಯಲು ತೀರ್ಮಾನಿಸಿದೆ. ಫೆ. 9ರಂದು ನಡೆಯಬೇಕಿದ್ದ ಈ ವಿಚಾರಣೆ, ಫೆ. 11ಕ್ಕೆ ಮುಂದೂಡಲ್ಪಟ್ಟಿತ್ತು. ಇದೇ ವೇಳೆ, ಸಭೆಗೆ ಗೈರಾಗುವ ನಿರ್ಧಾರವನ್ನು ಟೀಕಿಸಿರುವ ಬಿಜೆಪಿ, ದೇಶದ ಸಂಸ್ಥೆಗಳಿಗೆ ಅಗೌರವ ತೋರುವ ಅಧಿಕಾರ ಯಾರಿಗೂ ಇಲ್ಲ. ಟ್ವಿಟರ್‌ ಇದಕ್ಕೆ ತಕ್ಕ ಪ್ರತಿಫ‌ಲ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next