Advertisement

ಧಾನ್ಯದ ಕಿಟ್‌ ನೀಡಲು ನಿರ್ಧಾರ

01:18 PM Apr 26, 2020 | Suhan S |

ಮಾಗಡಿ: ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ವೃತ್ತಿಪರರಿಗೆ ಪೌರಕಾರ್ಮಿಕರಿಗೆ ದವಸ ಧಾನ್ಯದ ಕಿಟ್‌ ಹಂಚಿ ಸಹಾಯ ನೀಡಲು ತೀರ್ಮಾನಿಸಿದ್ದೇನೆ ಎಂದು ಎಂಎಲ್‌ಸಿ ಎಚ್‌.ಎಂ.ರೇವಣ್ಣ ತಿಳಿಸಿದರು.

Advertisement

ಪಟ್ಟಣದ ರೇವಣ್ಣ ತೋಟದ ಮನೆಯಲ್ಲಿ ಏರ್ಪಡಿಸಿದ್ದ ಸುದ್ದಗೋಷ್ಠಿಯಲ್ಲಿ ಮಾತನಾಡಿ, ಭಾನುವಾರ ಬೆಳಗ್ಗೆ 10ಕ್ಕೆ ಸಂಕಷ್ಟದಲ್ಲಿರುವ ವೃತ್ತಿಪರ ಸವಿತಾ, ಮಡಿವಾಳ ಸಮಾಜದವರಿಗೆ ಹಾಗೂ ಆಟೋ ಡ್ರೈವರ್‌ ಅಗರ್‌ಬತ್ತಿ ವ್ಯಾಜ್ಯವಿಲೇವಾರಿ ಚಾಲಕರು ಹಾಗೂ ಪೌರಕಾರ್ಮಿಕರಿಗೆ ಧವಸ ಧಾನ್ಯದ ಕಿಟ್‌ ವಿತರಿಸಲಾಗುವುದು. ಬುಧವಾರ ಕಾರ್ಡ್‌ ಇಲ್ಲದವರಿಗೆ, ವಲಸಿಗರಿಗೆ ಹಾಗೂ ಅಂಗವಿಕಲರಿಗೆ, ಧವಸ ಧಾನ್ಯದ ಕಿಟ್‌ ವಿತರಿಸಲಾಗುವುದು. ಬೀಡಿ ಕಾರ್ಮಿಕರಿಗೆ ಕರ್ಬೂಜದ ಹಣ್ಣು, ಟೊಮೆಟೋ, ಮಾಸ್ಕ್, ಸ್ಯಾನಿಟೈಸರ್‌ ವಿತರಿಸಲಾಗುವುದು ಎಂದರು.

ಕೆಪಿಸಿಸಿ ಟಾಸ್ಕ್ ಪೋರ್ಸ್‌ ಕಮಿಟಿ 8 ಜಿಲ್ಲೆಗೆ ನೇಮಕಗೊಂಡಿದ್ದು, ಅಧ್ಯಕ್ಷನಾಗಿದ್ದೇನೆ. ಎಲ್ಲೆಡೆ ಸಂಚರಿಸಿ ಕೋವಿಡ್ 19 ನಿರ್ಮೂಲನೆಗೆ ಜನರಲ್ಲಿ ಅರಿವು ಮೂಡಿಸಿ, ಮಾಸ್ಕ್ ಸ್ಯಾನಿಟೈಸರ್‌ ನೀಡಿ ಜಾಗೃತಿಗೊಳಿಸಲಾಗುತ್ತಿದೆ. ಬಡವರಿಗೆ ಕಾಂಗ್ರೆಸ್‌ ದಾನಿಗಳ ಸಹಕಾರದಿಂದ ತರಕಾರಿ, ಅಹಾರ ಪದಾರ್ಥಗಳ ವಿತರಣೆ ಮಾಡಲಾಗುತ್ತಿದೆ. ಕಾರ್ಡ್‌ ಇಲ್ಲದವರು 306, ವಲಸಿಗರು-180, ಅಂಗವಿಕಲರು-200 ಮಂದಿ, ವೃತ್ತಿಪರ ಸಮಾಜದವರು-500 ಮಂದಿ ಸೇರಿದಂತೆ ಒಟ್ಟಾರೆ 1,500 ಕಿಟ್‌ ನೀಡಲು ತೀರ್ಮಾನ ಕೈಗೊಂಡಿದ್ದೇವೆ ಎಂದರು.

ಸಮಾಜ ಸೇವಕಿ ವತ್ಸಲಾ ರೇವಣ್ಣ, ಶಶಾಂಕ್‌, ಚಿತ್ರನಟ ಅನೂಪ್‌ ರೇವಣ್ಣ, ಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷ ಬಸವರಾಜು, ಪುರಸಭೆ ಸದಸ್ಯ ರಘು, ಕೆ.ವಿ.ಬಾಲರಘು, ಶಿವಕುಮಾರ್‌, ಎಚ್‌.ಆರ್‌. ಮಂಜುನಾಥ್‌, ತೇಜಾ, ಎಚ್‌.ಶಿವಕುಮಾರ್‌, ಟಿ.ಎಸ್‌ .ಬಾಲರಾಜು, ಎಚ್‌.ಜಿ.ವೆಂಕಟೇಶ್‌, ಕೆಂಪಣ್ಣ, ಮೂರ್ತಿ, ರಿಯಾಜ್‌, ಎಂ.ಟಿ.ಶಿವಣ್ಣ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next