Advertisement

ಜಿಲ್ಲಾ ಮಟ್ಟದಲ್ಲಿ ಸಾವಿರ ಖೇಲೋ ಇಂಡಿಯಾ ಕೇಂದ್ರ ಸ್ಥಾಪನೆಗೆ ನಿರ್ಧಾರ

10:18 PM Jun 19, 2020 | Sriram |

ಹೊಸದಿಲ್ಲಿ: ಕೇಂದ್ರ ಕ್ರೀಡಾ ಸಚಿವಾಲಯ ದೇಶದ ಕ್ರೀಡಾಪಟುಗಳ ಪಾಲಿಗೆ ಸಿಹಿ ಸುದ್ದಿಯೊಂದನ್ನು ಬಿತ್ತರಿಸಿದೆ. ಜಿಲ್ಲಾ ಮಟ್ಟದಲ್ಲಿ ದೇಶಾದ್ಯಂತ ಸಾವಿರ “ಖೇಲೋ ಇಂಡಿಯಾ ಸೆಂಟರ್‌’ (ಕೆಐಸಿ) ತೆರೆಯಲು ನಿರ್ಧರಿಸಿದೆ. ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಈ ವಿಷಯವನ್ನು ತಿಳಿಸಿದರು.

Advertisement

“ಭಾರತ ಕ್ರೀಡೆಯ ಸೂಪರ್‌ಪವರ್‌ ಆಗಬೇಕು. ಯುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಬೆಳೆಸಬೇಕಿದೆ. ಇದಕ್ಕಾಗಿ ಜಿಲ್ಲಾ ಮಟ್ಟದಿಂದಲೇ ತಯಾರಿ ಆರಂಭಿಸುವುದು ಮುಖ್ಯ. ಹೀಗಾಗಿ ಸಾವಿರ ಕಡೆ ಖೇಲೋ ಇಂಡಿಯಾ ಕೇಂದ್ರಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ’ ಎಂದು ರಿಜಿಜು ಹೇಳಿದರು.

“ಅನುಭವಿ ಕ್ರೀಡಾ ಚಾಂಪಿಯನ್‌ಗಳು ಈ ಕೇಂದ್ರಗಳ ಉಸ್ತುವಾರಿ ನೋಡಕೊಳ್ಳಲಿದ್ದಾರೆ ಅಥವಾ ತರಬೇತುದಾರರಾಗಲಿದ್ದಾರೆ. ಇವರಿಂದಷ್ಟೇ ಭವಿಷ್ಯದ ಚಾಂಪಿಯನ್‌ಗಳನ್ನು ಗುರುತಿಸಲು ಸಾಧ್ಯ’ ಎಂದು ಸಚಿವರು ಅಭಿಪ್ರಾಯಪಟ್ಟರು.

 

Advertisement

Udayavani is now on Telegram. Click here to join our channel and stay updated with the latest news.

Next