Advertisement

ವಿವಿಧ ರೈಲುಗಳ ಸೇವೆ ಮುಂದುವರಿಕೆಗೆ ನಿರ್ಧಾರ

03:16 PM Aug 01, 2018 | Team Udayavani |

ಬೆಂಗಳೂರು: ಹೆಚ್ಚುವರಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಕೃಷ್ಣರಾಜಪುರಂ- ಕಾಚೇಗುಡಾ (07604-07605) ವಾರದ ವಿಶೇಷ ರೈಲನ್ನು ಅ.29ರವರೆಗೆ ಹಾಗೂ ಯಶವಂತಪುರ-ವಿಶಾಖಪಟ್ಟಣಂ ವಾರದ ತತ್ಕಾಲ್‌ ಎಕ್ಸ್‌ಪ್ರೆಸ್‌ (06579/06580) ರೈಲುಗಳ ಸೇವೆಯನ್ನು ಸೆ.28ರವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ.

Advertisement

ಕೃಷ್ಣರಾಜಪುರಂದಿಂದ ಸೋಮವಾರ ಮಧ್ಯಾಹ್ನ 3:25ಕ್ಕೆ ಹೊರಡುವ ರೈಲು ಮರುದಿನ ಬೆಳಗ್ಗೆ 6:55ಕ್ಕೆ ಕಾಚೇಗುಡಾಕ್ಕೆ ಬಂದು ಸೇರಲಿದೆ. ಅದೇ ರೀತಿ ರವಿವಾರ ಸಂಜೆ 6 ಗಂಟೆಗೆ ಕಾಚೇಗುಡಾದಿಂದ ಪ್ರಯಾಣ ಬೆಳೆಸುವ ರೈಲು ಮರುದಿನ ಬೆಳಗ್ಗೆ 6 ಗಂಟೆಗೆ ಕೃಷ್ಣರಾಜಪುರಂ ನಿಲ್ದಾಣಕ್ಕೆ ಆಗಮಿಸಲಿದೆ.
 
ತತ್ಕಾಲ ಎಕ್ಸ್‌ಪ್ರೆಸ್‌ ರೈಲು ಯಶವಂತಪುರದಿಂದ ಶುಕ್ರವಾರ ಸಂಜೆ 6:35ಕ್ಕೆ ಹೊರಡಲಿದ್ದು, ಮರುದಿನ ಮಧ್ಯಾಹ್ನ 2:35ಕ್ಕೆ ವಿಶಾಖಪಟ್ಟಣಂಗೆ ಬಂದು ಸೇರಲಿದೆ. ಅದೇ ರೀತಿ ವಿಶಾಖಪಟ್ಟಣಂ ನಿಲ್ದಾಣದಿಂದ ರವಿವಾರ ಮಧ್ಯಾಹ್ನ 1:45ಕ್ಕೆ ಹೊರಡ ಲಿದ್ದು, ಮರುದಿನ ಬೆಳಗ್ಗೆ 9:05ಕ್ಕೆ ಯಶವಂತಪುರಕ್ಕೆ ಆಗಮಿಸಲಿದೆ.

ಆ. 5ರಿಂದ ಯಶವಂತಪುರ- ವಿಶಾಖಪಟ್ಟಣಂ ವೀಕ್ಲಿ ತತ್ಕಾಲ್‌ ಎಕ್ಸ್‌ಪ್ರೆಸ್‌ ರೈಲಿಗೆ ತಾತ್ಕಾಲಿಕವಾಗಿ ಒಂದು 2ಟೀರ್‌ ಎಸಿ ಕೋಚ್‌, ಒಂದು ದ್ವಿತೀಯ ದರ್ಜೆ ಸ್ಲಿಪರ್‌ ಕೋಚ್‌ ಜೋಡಿಸಲು ನಿರ್ಧರಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next