Advertisement
ಸೋಮವಾರ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್.ಅಶ್ವತಿ, ಪ್ರಾಯೋಗಿಕವಾಗಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ 11 ಘನತ್ಯಾಜ್ಯ ಘಟಕಗಳನ್ನು ಆರಂಭ ಮಾಡುವುದಾಗಿ ತಿಳಿಸಿದರು.
Related Articles
Advertisement
ಗ್ರಾಮಾಂತರ ಪ್ರದೇಶದಲ್ಲಿ ಘನತ್ಯಾಜ್ಯ ನಿರ್ವಹಣೆಯ ಅಗತ್ಯತೆ, ಉದ್ದೇಶ ಹಾಗೂ ಅನುಕೂಲದ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಮನೆಗಳಲ್ಲೇ ಕರಗುವ ಹಾಗೂ ಒಣಕಸ ಬೇರ್ಪಡಿಸಿ ನೀಡುವ ಬಗ್ಗೆ ಮಾಹಿತಿ ನೀಡಿ ಜನರನ್ನು ಮಾನಸಿಕವಾಗಿ ಸಿದ್ಧಪಡಿಸಬೇಕಾಗಿದೆ. ಮೇ ತಿಂಗಳಿನಿಂದಲೇ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಶಿಬಿರಗಳನ್ನು ಆರಂಭಸಲಾಗುವುದು ಎಂದು ತಿಳಿಸಿದರು.
ಈ ಕಾಮಗಾರಿಗೆ ಹಣವನ್ನು ಸ್ವಚ್ಛ ಭಾರತ ಮಿಷನ್ ನೀಡಲಿದೆ. ತರಬೇತಿಯನ್ನು ಸಹ ಇದರಲ್ಲಿ ಅನುಭವವಿರುವವರು ಕೊಡುತ್ತಾರೆ. ಜನಕ್ಕೆ ಘನತ್ಯಾಜ್ಯ ನಿವಾರಣೆಯ ಒಳ್ಳೆಯ ಪರಿಣಮಗಳ ಬಗ್ಗೆ ಹಾಗೂ ಭೂಮಿಯಲ್ಲಿ ಕರಗುವ ಕಸ ಮತ್ತು ಕರಗದೆ ಇರುವ ಕಸದ ಬಗ್ಗೆ ವಿವಿರಿಸಿ ಹೇಳುವ ಮೂಲಕ ಕಸ ವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡದಿದ್ದರೆ ಆಗುವ ಪರಿಣಾಮಗಳ ಬಗ್ಗೆ ಸಹ ಮನವರಿಕೆ ಮಾಡಬೇಕು. ಇಲ್ಲದಿದ್ದರೆ ಇದು ಈ ಕಾರ್ಯಕ್ರಮ ಯಶಸ್ವಿಯಾಗುವುದಿಲ್ಲ. ಈ ನಿಟ್ಟಿನಲ್ಲಿ ಮೊದಲು ತಿಳುವಳಿಕೆ ಶಿಬಿರಗಳನ್ನು ಅಯೋಜಿಸಿದ ನಂತರವಷ್ಟೇ ಕಸ ಸಂಗ್ರಹಣಾ ಕಾರ್ಯಕ್ರಮ ಆರಂಭಿಸುವುದು ಸೂಕ್ತ ಎಂದು ತಿಳಿಸಿದರು.
ಹಸಿ ಹಾಗೂ ಒಣ ಕಸವನ್ನು ಮನೆಗಳ ಹಂತದಲ್ಲೇ ಬೇರ್ಪಡಿಸಿ ನೀಡಿದಾಗ ಹಸಿ ಕಸವನ್ನು ಉತ್ತಮ ಸಾವಯವ ಗೊಬ್ಬರವನ್ನಾಗಿಸಬಹುದು. ಬಳಸಿ ಎಸೆಯುವ ಕೋಳಿಮೊಟ್ಟೆಯ ಕವಚದಿಂದ ಕ್ಯಾಲ್ಸಿಯಂ ಪುಡಿ ತಯಾರಿಸಲು ಸಾಧ್ಯವಿದೆ.
ಪ್ಲಾಸ್ಟಿಕ್ನ ಅಪಾಯಗಳನ್ನು ತಿಳಿಸಿ ಸಾಧ್ಯವಾದಷ್ಟು ಬಳಸದಂತೆ ಹಾಗೂ ಅದರ ಪುನರ್ಬಳಕೆ ಮತ್ತು ಮರುಬಳಕೆ ಬಗ್ಗೆ ಜಾಗೃತಿ ಮೂಡಿಸಿದಾಗ ಜನರಲ್ಲಿ ಕಸವನ್ನು ಯಾವ ರೀತಿ ವಿಲೇವಾರಿ ಮಾಡಬಹುದೆಂಬುದು ಅರ್ಥವಾಗುತ್ತದೆ ಎಂದರು.