Advertisement

ಮಹಾತ್ಮರ ಜಯಂತಿ ವಿಜೃಂಭಣೆಯ ಆಚರಣೆಗೆ ನಿರ್ಧಾರ

10:45 AM Mar 31, 2022 | Team Udayavani |

ಹುಬ್ಬಳ್ಳಿ: ಡಾ| ಬಿ.ಆರ್‌.ಅಂಬೇಡ್ಕರ್‌ ಹಾಗೂ ಡಾ| ಬಾಬು ಜಗಜೀವನರಾಮ್‌ ಅವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಪಾಲಿಕೆ ಆಯುಕ್ತ ಡಾ|ಬಿ. ಗೋಪಾಲಕೃಷ್ಣ ಹೇಳಿದರು.

Advertisement

ಬುಧವಾರ ಇಲ್ಲಿನ ಪಾಲಿಕೆ ಆಯುಕ್ತರ ಸಭಾಂಗಣದಲ್ಲಿ ಡಾ| ಬಿ.ಆರ್‌.ಅಂಬೇಡ್ಕರ್‌, ಡಾ| ಬಾಬು ಜಗಜೀವನರಾಮ್‌ ಅವರ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಆಡಂಬರಿಕೆ ಸೀಮಿತವಾಗದೆ ಮಹಾನ್‌ ವ್ಯಕ್ತಿಗಳ ಮಾರ್ಗ, ಜನರಿಗೆ ಸಂವಿಧಾನ ಕುರಿತು ತಿಳಿಸುವುದಕ್ಕಾಗಿ ಪಾಲಿಕೆಯಿಂದ ಜಯಂತಿ ಸಪ್ತಾಹ ಆಚರಿಸಲಾಗುವುದು ಎಂದು ಹೇಳಿದರು.

ಅಂಬೇಡ್ಕರ್‌, ಜಗಜೀವನರಾಮ್‌ ಹಾಗೂ ಸಂವಿಧಾನ ಕುರಿತ ಉಪನ್ಯಾಸ ಮತ್ತು ಸರ್ವರಿಗೂ ಸಂವಿಧಾನ ನಾಟಕವನ್ನು ಹುಬ್ಬಳ್ಳಿ-ಧಾರವಾಡದಲ್ಲಿ ಪ್ರದರ್ಶನ ಮಾಡಲಾಗುವುದು. ಹೆಗ್ಗೇರಿಯ ಅಂಬೇಡ್ಕರ್‌ ಕ್ರೀಡಾಂಗಣದಿಂದ ಅಂಬೇಡ್ಕರ್‌ ವೃತ್ತದವರೆಗೆ ಮೆರವಣಿಗೆ ನಡೆಯಲಿದ್ದು, ಸ್ಥಳೀಯ ಇನ್ನಷ್ಟು ಕಲಾ ತಂಡಗಳಿಗೆ ಅವಕಾಶ ನೀಡಲಾಗುವುದು. ಪ್ರತಿಯೊಂದು ವಲಯ ಕಚೇರಿಗಳಿಂದ ಸ್ತಬ್ದ ಚಿತ್ರಗಳು ಇರಲಿವೆ ಎಂದರು. ಮುಖಂಡ ಗುರುನಾಥ ಉಳ್ಳಿಕಾಶಿ, ನ್ಯಾಯವಾದಿ ಲಕ್ಷ್ಮಣ ಬೀಳಗಿ ಮಾತನಾಡಿದರು.

ಪಾಲಿಕೆ ಹೆಚ್ಚುವರಿ ಆಯುಕ್ತ ಮಾದವ ಗಿತ್ತೆ, ತಹಶೀಲ್ದಾರ್‌ ಶಶಿಧರ ಮಾಡ್ಯಾಳ, ಮುಖ್ಯ ವೈದ್ಯಾಧಿಕಾರಿ ಶ್ರೀಧರ ದಂಡಪ್ಪನವರ, ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್‌.ಸಿ.ಬೇವೂರು, ಮಾಜಿ ಸಂಸದ ಐ.ಜಿ.ಸನದಿ, ಮುಖಂಡರಾದ ಪ್ರೇಮನಾಥ ಚಿಕ್ಕತುಂಬಳ, ಪ್ರಕಾಶ ಕ್ಯಾರಕಟ್ಟಿ, ಶಶಿಕಾಂತ ಬಿಜವಾಡ, ಬಸವರಾಜ ಬಮ್ಮನಾಳ, ಪ್ರಕಾಶ ಬುರಬುರೆ, ಮಾರುತಿ ದೊಡ್ಡಮನಿ ಸಭೆಯಲ್ಲಿ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next