Advertisement

ಪಡಿತರ ದಾಸ್ತಾನು ಪರಿಶೀಲನೆ

03:39 PM Apr 23, 2020 | mahesh |

ಚಾಮರಾಜನಗರ: ನಗರದಲ್ಲಿರುವ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಉಗ್ರಾಣಕ್ಕೆ ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ ದಿಢೀರ್‌ ಭೇಟಿ ನೀಡಿ ಪಡಿತರ ಆಹಾರ ಧಾನ್ಯಗಳ ದಾಸ್ತಾನು ಪರಿಶೀಲಿಸಿದರು. ಅನೀಕ್ಷಿತವಾಗಿ ಆಹಾರ ನಿಗಮದ ಉಗ್ರಾಣಕ್ಕೆ ಭೇಟಿಕೊಟ್ಟ ಜಿಲ್ಲಾಧಿಕಾರಿ, ನ್ಯಾಯಬೆಲೆ ಅಂಗಡಿಗಳಿಗೆ ವಿತರಣೆ ಮಾಡಿರುವ ಪಡಿತರ ಪ್ರಮಾಣ, ಎತ್ತುವಳಿ ವಿವರಗಳ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಪರಾಮರ್ಶಿಸಿದರು. ವಿತರಣೆ, ಎತ್ತುವಳಿ ದಾಸ್ತಾನು ಮಾಡಿರುವ ಲೆಕ್ಕಪತ್ರ, ಭೌತಿಕವಾಗಿ ಹಾಗೂ ಲಿಖೀತವಾಗಿ ವಹಿಗಳಲ್ಲಿ ನಮೂದು ಮಾಡದೇ ಇರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Advertisement

ಆನ್‌ಲೈನ್‌ ಮೂಲಕ ದಾಖಲು ಎಂಬ ಸಬೂಬು ಹೇಳುವುದು ಬೇಡ. ಪ್ರತಿ ವಿತರಣೆ ಹಾಗೂ ದಾಸ್ತಾನು ಬಗ್ಗೆ ಲಿಖೀತವಾಗಿ ನಿಯಮಾನುಸಾರ ನಮೂದು ಮಾಡುವಂತೆ ತಾಕೀತು ಮಾಡಿದರು. ಸ್ಟಾಕ್‌ ರಿಜಿಸ್ಟರ್‌ನ್ನು ಇನ್ನು ಮುಂದೆ ಆಯಾ ದಿನವೇ ದಾಸ್ತಾನು ವಿತರಣೆ ದಾಖಲು ಮಾಡಬೇಕು.  ಲೆಕ್ಕಪತ್ರದಲ್ಲಿ ಗೊಂದಲವಿರಬಾರದು. ಆಹಾರ ಇಲಾಖೆಯ ಶಿರಸ್ತೇದಾರರು ಆಗಿಂದಾಗ್ಗೆ ಗೋದಾಮಿಗೆ ಭೇಟಿ ನೀಡಿ ತಪಾಸಣೆ ಮಾಡಬೇಕು ಎಂದು ಸೂಚಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಾಚಪ್ಪ, ತಹಶೀಲ್ದಾರ್‌ ಮಹೇಶ್‌, ಆಹಾರ ನಿಗಮದ ಜಿಲ್ಲಾ ವ್ಯವಸ್ಥಾಪಕ ಬಾಲಕೃಷ್ಣ, ಆಹಾರ ಶಿರಸ್ತೇದಾರ್‌ ಲಕ್ಷ್ಮೀ, ಗೋದಾಮು ವ್ಯವಸ್ಥಾಪಕ ಲಕ್ಕೇಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next