Advertisement

ಸ್ವಯಂ ಘೋಷಣಾ ಪತ್ರ ಕೊಟ್ಟರೂ ಸಾಲ ಮನ್ನಾ

06:55 AM Nov 22, 2018 | |

ಶಿರಸಿ: ಬೆಳೆ ಸಾಲ ಮನ್ನಾಕ್ಕೆ ಯಾವುದೇ ಗೊಂದಲ ಬೇಡ. ಸಹಕಾರಿ ಸಂಘದ ಸದಸ್ಯರಾಗಿದ್ದು, ಸಾಲ ಇದ್ದಲ್ಲಿ ಸ್ವಯಂ
ಘೋಷಣೆ ಪತ್ರ ನೀಡಿದರೆ ಸಾಕು. ಅದನ್ನೇ ಪರಿಗಣಿಸಿ ಎಲ್ಲರ ಒಂದು ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡಲಾಗುತ್ತದೆ ಎಂದು ಸಹಕಾರಿ ಸಚಿವ ಬಂಡೆಪ್ಪ ಖಾಶೆಂಪೂರ ಹೇಳಿದರು.

Advertisement

ಶಿರಸಿಯ ಟಿಎಸ್‌ ಎಸ್‌ ಪ್ರಾಂಗಣದಲ್ಲಿ ಬುಧವಾರ ರಾಜ್ಯಮಟ್ಟದ ಸಹಕಾರಿ ಸಪ್ತಾಹದಲ್ಲಿ ಸಾಧಕ ಸಂಸ್ಥೆ, ವ್ಯಕ್ತಿಗಳಿಗೆ ಸನ್ಮಾನ ಮಾಡಿ ಮಾತನಾಡಿದ ಅವರು, ರೈತರ ಸಾಲ ಮನ್ನಾಗಾಗಿ 9,448 ಕೋಟಿ ರೂ. ತೆಗೆದಿರಿಸಲಾಗಿದೆ.

ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳು ಅರ್ಜಿ ಭರ್ತಿ ಮಾಡಿ ಕಳಿಸಲು ಆರು ತಿಂಗಳ ಅವಕಾಶ ನೀಡಲಾಗಿದೆ. ವಿಳಂಬ ಆದಲ್ಲಿ ಬರುವ ಮೊತ್ತ ಕೂಡ ವಿಳಂಬ ಆಗುತ್ತದೆ. ಅದಾಗಬಾರದು ಎಂದರೆ ಬೇಗ ಕಂಪ್ಯೂಟರ್‌ನಲ್ಲಿ ಸೊಸೈಟಿಗಳು ಅರ್ಜಿ ಭರ್ತಿ ಮಾಡಿ ಕಳಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next