Advertisement
ಋಣಭಾರ ಪರಿಹಾರ ಯೋಜನೆಯನ್ನು ದುರುಪಯೋಗ ಮಾಡಿಕೊಂಡು ಹಣ ಗಳಿಸುತ್ತಿರುವ ಘಟನೆ ಪಂಜದಲ್ಲಿ ಬುಧವಾರ ಬೆಳಕಿಗೆ ಬಂದಿದೆ.
ಯೋಜನೆ ಕುರಿತು ಸರಿಯಾದ ಮಾಹಿತಿ ಇಲ್ಲದವರು ಈ ಕಚೇರಿಗೆ ದಾಖಲೆ ಪತ್ರಗಳೊಂದಿಗೆ ಆಗಮಿಸಿದ್ದಾರೆ. ಫಲಾನುಭವಿಗಳು ಯೋಜನೆಯಲ್ಲಿ ತಿಳಿಸಿದಂತೆ ಮೂಲ ದಾಖಲೆಗಳನ್ನು ಅಂಗಡಿ ಸಿಬಂದಿ ಕೈಗೆ ಒಪ್ಪಿಸಿದ್ದಾರೆ. ಅದನ್ನು ಪಡೆದ ಕಚೇರಿ ಸಿಬಂದಿ ಅರ್ಜಿ ನಮೂನೆ ಭರ್ತಿ ಮಾಡಿ ಕೊಡುತ್ತೇವೆ ಎಂದಿದ್ದಾರೆ.
Related Articles
Advertisement
ದಾಖಲೆ ಸಿದ್ಧಪಡಿಸಿ ಕೊಡುವ ಕೆಲಸಫಲಾನುಭವಿಗಳಿಂದ ದಾಖಲೆ ಪತ್ರ ಪಡೆದು, ಬಳಿಕ ಅರ್ಜಿ ನಮೂನೆಯಲ್ಲಿ ಟೈಪ್ ಮಾಡಿ ಸಿದ್ಧಪಡಿಸುತ್ತಿದ್ದಾರೆ. ನಕಲು ಪ್ರತಿ ತೆಗೆಯುವುದು, ಅರ್ಜಿ ನಮೂನೆ ಹಾಗೂ ದಾಖಲೆಗಳನ್ನು ಲಕೋಟೆಯಲ್ಲಿ ತುಂಬುವುದು ಇತ್ಯಾದಿ ಕೆಲಸಗಳಿಗೆ ಖರ್ಚಿನ ಬಾಬ್ತು 150 ರೂ.ಗಳಿಂದ 300 ರೂ. ತನಕ ಪಡೆಯುತ್ತಿರುವುದು ಕಂಡು ಬರುತ್ತಿದೆ. ಒಂದು ಪ್ರತಿಯನ್ನು ಉಪ ವಿಭಾಗಾಧಿಕಾರಿಗೆ, ಮತ್ತೂಂದು ಪ್ರತಿಯನ್ನು ಮುಖ್ಯಮಂತ್ರಿ ಕಚೇರಿಗೆ ಸಲಹೆ ನೀಡುತ್ತಿದ್ದಾರೆ. ಸಣ್ಣ ರೈತರು ಭೂರಹಿತ ಕೃಷಿ ಕಾರ್ಮಿಕರು ದುರ್ಬಲ ವರ್ಗದ ಜನತೆ ಅಧಿಕ ಬಡ್ಡಿಯಿಂದ ಶೋಷಣೆಗೆ ಒಳಗಾಗುವುದನ್ನು ತಪ್ಪಿಸಲು ಈ ಯೋಜನೆಯನ್ನು ರಾಜ್ಯ ಸರಕಾರ ಜಾರಿಗೆ ತಂದಿದೆ.
ತನಿಖೆ ಮಾಡುವೆಮುಗ್ಧ ಬಡವರನ್ನು ಈ ರೀತಿ ವಂಚಿಸಿ ಹಣ ಗಳಿಸುವುದು ತಪ್ಪು. ಕಾನೂನು ದುರುಪಯೋಗ ಮಾಡಿಕೊಂಡು ವಂಚನೆ ನಡೆಸಿದರೆ ಅಂಥವರ ಮೇಲೆ ಕ್ರಿಮಿನಲ್ ದೂರು ದಾಖಲಿಸಿಕೊಳ್ಳುತ್ತೇವೆ. ಈಗಲೇ ಅಲ್ಲಿಗೆ ಅಧಿಕಾರಿಗಳನ್ನು ಕಳುಹಿಸಿ ತನಿಖೆ ನಡೆಸುತ್ತೇನೆ. ಗುರುವಾರ ನಾನು ಖುದ್ದು ಅಲ್ಲಿಗೆ ತೆರಳಿ ತನಿಖೆ ಮಾಡುವೆ.
– ಕುಂಞಿ ಅಹಮ್ಮದ್ ತಹಶೀಲ್ದಾರ್ ಸುಳ್ಯ
– ಕುಂಞಿ ಅಹಮ್ಮದ್ ತಹಶೀಲ್ದಾರ್ ಸುಳ್ಯ
ಸಿದ್ಧಪಡಿಸಿ ಕೊಡುತ್ತಿದ್ದೇವೆನಮ್ಮಲ್ಲಿ ಅರ್ಜಿಗಳು ಸಿಗುತ್ತಿಲ್ಲ. ನಾವು ಅರ್ಜಿ ನಮೂನೆಗಳನ್ನು ತಯಾರು ಮಾಡಿ ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿ ಕೊಡುತ್ತೇವೆ. ಅದಕ್ಕೆ 150ರಿಂದ 200 ರೂ. ಪಡೆದುಕೊಳ್ಳುತ್ತಿದ್ದೇವೆ.
– ಪಂಜದ ಕಚೇರಿಯ ಸಿಬಂದಿ
– ಪಂಜದ ಕಚೇರಿಯ ಸಿಬಂದಿ
200ಕ್ಕೂ ಹೆಚ್ಚು ಜನರು
ಪಂಜದ ಕಚೇರಿಗೆ ಬುಧವಾರ 200ಕ್ಕೂ ಮಿಕ್ಕಿದ ಬಡ ಫಲಾನುಭವಿಗಳು ಆಗಮಿಸಿದ್ದರು. ಕಚೇರಿ ಮುಂದೆ ಸಾಲುಗಟ್ಟಿ ನಿಂತಿದ್ದರು. ಒಂದು ಬಾರಿ ಸಾಲದಿಂದ ಮುಕ್ತರಾಗಿ ಅಡವಿಟ್ಟ ಆಭರಣಗಳನ್ನು ಮರಳಿ ಪಡೆಯುವ ಕನಸಿನೊಂದಿಗೆ ಬಂದಿದ್ದ ಜನರು ಇಲ್ಲಿ ಜಾಸ್ತಿ ಹಣ ನೀಡಬೇಕಾಗಿ ಬಂದಿದೆ.