Advertisement

ಐವರನ್ನು ಕೊಚ್ಚಿ ಕೊಂದಿದ್ದ  ಪಾಪಿಗೆ ಮರಣದಂಡನೆ

09:30 AM Jul 23, 2017 | Team Udayavani |

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹರಳೆ ಗ್ರಾಮದಲ್ಲಿ ಐವರನ್ನು ಬರ್ಬರವಾಗಿ ಹತ್ಯೆಗೈದಿದ್ದ ಮುರುಗೇಶನ್‌ (49) ಎಂಬ ಅಪರಾಧಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಶನಿವಾರ ಮರಣ ದಂಡನೆ ವಿಧಿಸಿ ತೀರ್ಪು ನೀಡಿದೆ. 

Advertisement

ಅಪರಾಧಿ ಮುರುಗೇಶನ್‌ ಅಲಿಯಾಸ್‌ ಮುರುಗ ತಮಿಳುನಾಡಿನ ಸೇಲಂ ಜಿಲ್ಲೆಯ ಮೆಟ್ಟೂರು ತಾಲೂಕು ಪರಿಯಾರ್‌ನಗರ ಗ್ರಾಮದವನು. ಕೊಳ್ಳೇಗಾಲದ ಕುಂತೂರು ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆಗೆ ಕಬ್ಬು ಕಟಾವು ಮಾಡಲು ಬಂದಿದ್ದ ಇಬ್ಬರು ಮಹಿಳೆಯರು ಸೇರಿ ನಾಲ್ವರು ಕೂಲಿ ಕಾರ್ಮಿಕರು ಹಾಗೂ ಬಾಲಕಿಯನ್ನು ಹರಳೆ ಗ್ರಾಮದ ತೋಟದ ಮನೆಯಲ್ಲಿ 2015ರ ಮೇ 12ರ ಬೆಳಗಿನ ಜಾವ 1.30ರಲ್ಲಿ ಕಬ್ಬು ಕಟಾವು ಮಾಡುವ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದ. ತಮಿಳುನಾಡಿನ ಈರೋಡ್‌ ಜಿಲ್ಲೆಯ ಆಂದಿಯೂರು ಗ್ರಾಮ ಮೂಲದವರಾಗಿದ್ದ ಮೇಸಿŒ ರಾಜೇಂದ್ರನ್‌ (37), ರಾಜಮ್ಮ (36), ರಾಜಮ್ಮಳ ಮಗಳು ರೋಜಾ (8), ಮಾಕಂಪಾಳ್ಯದ ಕಾಶಿ ಅ. ಶಿವಕುಮಾರ್‌ (38) ಹಾಗೂ ಕಡಲೂರು ಗ್ರಾಮದ ಶಿವಮ್ಮ (37) ಕೊಲೆಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next