Advertisement

ಸಾಗರದಲ್ಲಿ ಮುಂದುವರಿದ ಮಂಗಗಳ ಸಾವು

12:48 AM Jan 28, 2019 | Team Udayavani |

ಸಾಗರ: ತಾಲೂಕಿನಲ್ಲಿ ಮಂಗಗಳ ಸಾವು ಮುಂದುವರಿದಿದ್ದು, ನಗರದ ಹೊರವಲಯದ ಚಂದ್ರಮಾವಿನಕೊಪ್ಪ ಬಡಾವಣೆಯಲ್ಲಿ ಮಂಗವೊಂದು ಸಾವಿಗೀಡಾಗಿರುವುದು ಭಾನುವಾರ ಬೆಳಕಿಗೆ ಬಂದಿದೆ. ಬಡಾವಣೆಯ ನಿವಾಸಿ ನಿವೃತ್ತ ಅರಣ್ಯಾಧಿಕಾರಿ ನೀಲಕಂಠಪ್ಪ ಅವರ ಮನೆಯ ಮೇಲ್ಭಾಗದಲ್ಲಿ ಮಂಗವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

Advertisement

ಮಂಗ ಸತ್ತು ಒಂದು ವಾರ ಕಳೆದಿರಬಹುದು ಎಂದು ಊಹಿಸಲಾಗಿದೆ. ಪಶು ವೈದ್ಯಕೀಯ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಶವವನ್ನು ದಹಿಸಿದ್ದಾರೆ. ಇದಲ್ಲದೆ ಅರಳಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಮೂರು ಮೃತ ಮಂಗಗಳು ಪತ್ತೆಯಾಗಿದೆ. ಸಂಪದಲ್ಲಿ ಎರಡು ಹಾಗೂ ಕಂಚಿಕೈನಲ್ಲಿ ಒಂದು ಮಂಗವನ್ನು ಸುಟ್ಟು ಮೆಲಾಥಿಯಾನ್‌ ಪುಡಿ ಸಿಂಪಡಿಸಲಾಗಿದೆ.

ಅರಳಗೋಡಿನಲ್ಲಿ ಭಾನುವಾರ ಒಂದು ಶಂಕಿತ ಕೆಎಫ್‌ಡಿ ಪ್ರಕರಣ ಕಂಡುಬಂದಿದ್ದು ಮಣಿಪಾಲ್‌ಗೆ ರವಾನಿಸಲಾ ಗಿದೆ. ಮಂಗನ ಕಾಯಿಲೆಯಿಂದ ಕೊನೆಯುಸಿರೆಳೆದ ಶ್ವೇತಾಳ ತಮ್ಮ, ತಂದೆ ಹಾಗೂ ದೊಡ್ಡಪ್ಪ ಮಣಿಪಾಲ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮೂವರೂ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next