Advertisement

ಮನೆ ಅಂಗಳದಲ್ಲೇ ಮೃತಪಟ್ಟ ಜೋಡೆತ್ತು

09:00 PM Jul 05, 2021 | Team Udayavani |

ಶಿರಸಿ: ಜೋಡೆತ್ತಿನ ಮಾಲೀಕ ಕೆರೆಯಲ್ಲಿ ಮೈ ತೊಳಸಿಕೊಂಡು ಮನೆ ಅಂಗಳಕ್ಕೆ ಕರೆ ತರುತ್ತಿದ್ದಂತೆ ಕುಸಿದು ಬಿದ್ದ ಎರಡೂ ಎತ್ತುಗಳು ರೈತನ ಕಣ್ಣೆದುರೇ ಮೃತಪಟ್ಟ ಧಾರುಣ ಘಟನೆ ತಾಲೂಕಿನ ದಾಸನಕೊಪ್ಪದಲ್ಲಿ ನಡೆದಿದೆ.

Advertisement

ಇಲ್ಲಿನ ರೈತ ಹಾಲೇಶ ತಿಪ್ಪಣ್ಣ ಗಾಳಿ ದಾಸನಕೊಪ್ಪ ಅವರಿಗೆ ಸಂಬಂಧಿಸಿದ ಒಂದು ಲಕ್ಷ ರೂ.ಗೂ ಅಧಿಕ ಮೌಲ್ಯದ ಎತ್ತುಗಳು ಮೃತಪಟ್ಟು ರೈತನಿಗೆ ದಿಕ್ಕು ಕಾಣದಂತಾಗಿದೆ. ಎಂದಿನಂತೆ ರವಿವಾರ ಕೆರೆಯಲ್ಲಿ ಮೈ ತೊಳಸಿಕೊಂಡು ಮನೆಗೆ ಕರೆ ತಂದಿದ್ದರು. ಹಾಲೇಶ ಅವರ ಎರಡು ಎಕರೆ ಕೃಷಿ ಕ್ಷೇತ್ರ ಹಾಗೂ ಉಳಿದವರ ಬೇಸಾಯಕ್ಕೂ ನೆರವಾಗುತ್ತಿದ್ದ ಜೋಡೆತ್ತಿನ ಅಕಾಲಿಕ ಸಾವು ಕೈತನನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ.

ಪಶು ತಜ್ಞರು ವಿಷ ಆಹಾರ ಸೇವಿಸಿದ ಪರಿಣಾಮ ಆಗಿರಬೇಕು ಎಂದಿದ್ದು, ಮರಣೋತ್ತರ ಪರೀಕ್ಷೆಯಿಂದ ಇದು ದೃಢವಾಗಬೇಕಿದೆ. ಪಶು ಆಹಾರದಲ್ಲಿ ವಿಷ ಇತ್ತೋ? ಕೆರೆಯ ನೀರಿನಲ್ಲೋ ಎಂಬುದೂ ತನಿಖೆಯಿಂದ ಗೊತ್ತಾಗಬೇಕಿದೆ. ಬಡ ರೈತನ ನೋವಿಗೆ ಸ್ಪಂದಿಸುವಂತೆ ಈ ಭಾಗದ ನಾಗರಿಕರು ಸರಕಾರವನ್ನು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next