Advertisement

ರೈಲು ಡಿಕ್ಕಿಯಾಗಿ ಆನೆಗಳ ಸಾವು

06:10 AM Jun 05, 2018 | Team Udayavani |

ಸಕಲೇಶಪುರ: ಗೂಡ್ಸ್‌ ರೈಲಿಗೆ ಅಡ್ಡ ಬಂದ ಎರಡು ಮರಿಯಾನೆಗಳು ಮೃತಪಟ್ಟಿರುವ ಘಟನೆ ತಾಲೂಕಿನ ಕಾಗಿನಹರೆ ಸಮೀಪ ನಡೆದಿದೆ.

Advertisement

ಮಂಗಳೂರಿನಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಗೂಡ್ಸ್‌ ರೈಲಿಗೆ ಸೋಮವಾರ ಬೆಳಗ್ಗಿನ ಜಾವ 71ನೇ ಮೈಲು ಸಮೀಪ ಎರಡು ಮರಿ ಆನೆಗಳು ಅಡ್ಡಬಂದಿವೆ. ಡಿಕ್ಕಿ ರಭಸಕ್ಕೆ ಅವು ಸ್ಥಳದಲ್ಲೇ ಮೃತಪಟ್ಟಿವೆ. ಇದರಿಂದ ರೈಲು ಸಂಚಾರಕ್ಕೆ ಕೆಲಕಾಲ ಅಡಚಣೆಯಾಗಿತ್ತು. ಮರಿಯಾನೆ ಜೊತೆಗೆ ಮತ್ತೂಂದು ಆನೆ ಮೃತಪಟ್ಟಿರುವ ಶಂಕೆ ಇದ್ದು, ಈ ಬಗ್ಗೆ ಪರೀಶೀಲನೆ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಆನೆ ಕಾರಿಡಾರ್‌ ನಿರ್ಮಾಣವಾದಲ್ಲಿ ಮಾತ್ರ ವನ್ಯಜೀವಿಗಳಿಗೆ ಹಾಗೂ ಜನಸಾಮಾನ್ಯರ ರಕ್ಷಣೆ ಸಾಧ್ಯ. ಜೊತೆಗೆ ರೈಲು ಹಳಿಗಳ ಎರಡು ಬದಿಯಲ್ಲೂ ಬೇಲಿ ಹಾಕಬೇಕೆಂಬ ಯೋಜನೆ ಇದ್ದರೂ ಇನ್ನು ಕಾರ್ಯಗತವಾಗಿಲ್ಲ ಎಂದು ಸ್ಥಳೀಯರು  ದೂರಿದ್ದಾರೆ. 

ಇತ್ತೀಚೆಗಷ್ಟೇ ಬೆಳಗಾವಿಯ ಖಾನಾಪುರದಲ್ಲಿ ಆನೆಯೊಂದು ರೈಲಿಗೆ ಸಿಲುಕಿ ಸೇತುವೆಯಿಂದ ಕೆಳಗೆ ಬಿದ್ದು ಸಾವನ್ನಪ್ಪಿತ್ತು. ಇದಷ್ಟೇ ಅಲ್ಲ, ದೇಶದಲ್ಲಿ ರೈಲಿಗೆ ಸಿಲುಕಿ ಆನೆಗಳು ಸಾಯುವುದು ಅಸ್ಸಾಂನಲ್ಲಿ ಮಾಮೂಲಿನಂತಾಗಿದೆ. ಕಳೆದ ಎರಡು ವರ್ಷಗಳಲ್ಲೇ ಸುಮಾರು 11 ಆನೆಗಳು ಸಾವನ್ನಪ್ಪಿವೆ. 

Advertisement

Udayavani is now on Telegram. Click here to join our channel and stay updated with the latest news.

Next